Advertisement

ಕಲ್ಲಾಪು ಬಳಿ ವಿದ್ಯುತ್‌ ಕಂಬಕ್ಕೆ  ಸ್ಕೂಟರ್‌ ಢಿಕ್ಕಿ : ಸವಾರ ಸಾವು

12:16 PM Feb 26, 2017 | Team Udayavani |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ವಿದ್ಯುತ್‌ ಕಂಬಕ್ಕೆ ಸ್ಕೂಟರ್‌ ಢಿಕ್ಕಿ ಹೊಡೆದು ಸ್ಕೂಟರ್‌ ಚಲಾಯಿಸುತ್ತಿದ್ದ ತೊಕ್ಕೊಟ್ಟು ಟಿ.ಸಿ.ರೋಡಿನ ಅಕ್ಕರೆಕೆರೆ ನಿವಾಸಿ ಮಯ್ಯದ್ದಿ ಅವರ ಪುತ್ರ ಸಂಶುದ್ದೀನ್‌ (23) ಮೃತಪಟ್ಟಿದ್ದು ಸಹ ಸವಾರ ವಾಸಿಂ ಗಂಭೀರ ಗಾಯಗೊಂಡಿದ್ದಾರೆ.

Advertisement

ಮಂಗಳೂರು ಬಂದರಿನ ದಕ್ಕೆಯಲ್ಲಿ ಕೆಲಸ ನಿರ್ವಹಿಸುವ ಸಂಶುದ್ದೀನ್‌ ಸಹೋದರನೊಂದಿಗೆ ಸ್ಕೂಟರ್‌ನಲ್ಲಿ ಮಂಗಳೂರು ಕಡೆ ತೆರಳುತ್ತಿದ್ದಾಗ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಸಂಶುದ್ದೀನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಸಹೋದರ ವಾಸಿಂನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆ ದಾಖಲಿಸಿದ್ದಾರೆ.

ಸಂಶುದ್ದೀನ್‌ ಅವಿವಾಹಿತರಾಗಿದ್ದು, ದ‌ಕ್ಕೆಯಲ್ಲಿ ಬಾಕ್ಸ್‌ ಮಾರಾಟದ ಕೆಲಸ ನಿರ್ವಹಿಸುತ್ತಿದ್ದರು. ಸಹೋದರ ವಾಸಿಂ ದ‌ಕ್ಕೆಯಲ್ಲಿ ಅವರ ತಂದೆಯ ಸ್ವಂತ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಂದೆ, ತಾಯಿ, ಐವರು ಸಹೋದರರು ಹಾಗೂ  ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next