Advertisement

CM ಸಿದ್ದರಾಮಯ್ಯ ಅವರಿದ್ದ ವೇದಿಕೆಗೆ ನುಗ್ಗಿದ ಯುವಕ:ಎಳೆದೊಯ್ದ ಭದ್ರತಾ ಸಿಬಂದಿ

11:09 PM Sep 15, 2024 | Team Udayavani |

ಬೆಂಗಳೂರು: ವಿಧಾನಸೌಧದ ಎದುರು ಭಾನುವಾರ ನಡೆದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಕಾರ್ಯಕ್ರಮದಲ್ಲಿ  ವೇದಿಕೆ ಮೇಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಬರಲು ಯತ್ನಿಸಿದ್ದು, ಭದ್ರತಾ ಸಿಬಂದಿ ಕೂಡಲೇ ಅತನನ್ನು ಸ್ಥಳದಿಂದ ಎಳೆದೊಯ್ದಿದ್ದಾರೆ.

Advertisement

ಸಿದ್ದರಾಮಯ್ಯ ಅವರು ಇತರ ಗಣ್ಯರೊಂದಿಗೆ ಕುಳಿತಿದ್ದ ವೇದಿಕೆಗೆ ಶಾಲು ಹೊದ್ದುಕೊಂಡಿದ್ದ ಯುವಕ ಏಕಾಏಕಿ ಜಿಗಿದಿಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವೇಳೆ ಸಚಿವ ಎಚ್.ಸಿ. ಮಹದೇವಪ್ಪ ಭಾಷಣ ಮಾಡುತ್ತಿದ್ದರು.ಆತ ಶಾಲು ಹೊದಿಸಲು ಸಿಎಂ ಬಳಿ ಬಂದಿದ್ದು ಅದನ್ನು ಸಿದ್ದರಾಮಯ್ಯ ಅವರತ್ತ ಎಸೆದಿದ್ದಾನೆ.

ಕೆಂಪು ಮತ್ತು ಹಳದಿ ಕನ್ನಡ ಧ್ವಜದಂತಹ ಸ್ಕಾರ್ಫ್ ಹಿಡಿದಿದ್ದ ಯುವಕ ವೇದಿಕೆಯ ಮಧ್ಯಭಾಗದಿಂದಲೇ ಮೇಲೇರಿ ಸಿಎಂರತ್ತ ಮುನ್ನುಗ್ಗಿದ್ದು ಭದ್ರತಾ ಸಿಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕನಕಪುರದವನೆಂದು ಹೇಳಲಾಗಿದ್ದು ವಿಚಾರಣೆ ನಡೆಸಿದ್ದಾರೆ. ಭದ್ರತಾ ವೈಫಲ್ಯ ಕಂಡು ಬಂದ ಕಾರಣ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next