Advertisement

ಅಯೋಧ್ಯೆ ತೀರ್ಪಿನ ನಂತರ; ಜಮ್ಮುವಿನಲ್ಲಿ ಶಾಲಾ-ಕಾಲೇಜು ಆರಂಭ, ನಿಷೇಧಾಜ್ಞೆ ತೆರವು

09:47 AM Nov 12, 2019 | Team Udayavani |

ಜಮ್ಮು: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಸುಪ್ರೀಂಕೋರ್ಟ್ ನವೆಂಬರ್ 9ರಂದು ಘೋಷಿಸಿದ ನಂತರ ಜಮ್ಮುವಿನ ಶಾಲಾ-ಕಾಲೇಜು ಸೋಮವಾರ ಪುನರಾರಂಭಗೊಂಡಿದೆ. ತೀರ್ಪು ಪ್ರಕಟನೆ ನಿಟ್ಟಿನಲ್ಲಿ ಜಮ್ಮು ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು.

Advertisement

ಜಮ್ಮು ವಿಭಾಗೀಯ ಕಮಿಷನರ್ ಸಂಜೀವ್ ವರ್ಮಾ ಅವರ ಪತ್ರಿಕಾ ಪ್ರಕಟನೆಯಲ್ಲಿ, ಎಲ್ಲಾ ಶಾಲಾ ಕಾಲೇಜುಗಳು ನವೆಂಬರ್ 11ರಂದು ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೆಕ್ಷನ್ 144 ಅನ್ನು ನವೆಂಬರ್ 9ರ ಮಧ್ಯರಾತ್ರಿವರೆಗೆ ಜಾರಿಗೊಳಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂಡೂಡಲಾಗಿತ್ತು.

ಅಯೋಧ್ಯೆ ತೀರ್ಪು ಪ್ರಕಟನೆ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ, ಕರ್ನಾಟಕದಲ್ಲಿಯೂ ಶನಿವಾರ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next