Advertisement

ಶಾಲಾ ವಾಹನ: ಸುರಕ್ಷಾ ಕ್ರಮ ಅನುಷ್ಠಾನ ಮೊದಲ ಆದ್ಯತೆಯಾಗಲಿ

02:12 PM Jun 13, 2017 | Harsha Rao |

ಪುತ್ತೂರು: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಶಾಲೆಗಳು ಆರಂಭಗೊಂಡು ಹಲವು ದಿನಗಳು ಕಳೆದ ಬಳಿಕ ಅಥವಾ ಅವಘಡಗಳು ಸಂಭ ವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಆರಂಭ ದಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

Advertisement

ಕಳೆದ 2016ನೇ ಸಾಲಿನ ಜೂನ್‌ ತಿಂಗಳಲ್ಲಿ ಕುಂದಾಪುರದ ತ್ರಾಸಿಯಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯುವ ವಾಹನ ಅಪಘಾತಗೊಂಡ ಬಳಿಕ ಎಚ್ಚೆತ್ತುಕೊಂಡ ಇಲಾಖೆಗಳು ಕಠಿನ ನಿಯಮ ಗಳನ್ನು ಅನುಸರಿಸಲು ಮುಂದಾಗಿದ್ದವು. ಶಾಲೆ ಗಳು ಆರಂಭ ಗೊಂಡು ಹಲವು ದಿನಗಳು ಕಳೆದ ಬಳಿಕ ಇಲಾಖೆ ಗಳು ಕೈಗೊಂಡ ಈ ಕ್ರಮ ಗಳಿಗೆ ಸಾರ್ವಜನಿಕರು, ಶಾಲಾ ವಾಹನಗಳಿಗೆ ಸಂಬಂಧ ಪಟ್ಟವರಿಂದ ವಿರೋಧವೂ ವ್ಯಕ್ತವಾಗಿತ್ತು.

ಆರ್‌ಟಿಒ ನಿಯಮ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಕ್ಕಳನ್ನು ಕೊಂಡೊಯ್ಯುವಾಗ ಶಾಲಾ ಬಸ್‌ಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಆರ್‌ಟಿಒ ಮೂಲಕ ಈ ರೀತಿ ನಿರ್ದೇಶನ ನೀಡಲಾಗಿದೆ.
- ಶಾಲಾ ಬಸ್ಸಿನ ಹಿಂಭಾಗ ಹಾಗೂ ಮುಂಭಾಗ ದಲ್ಲಿ ಕಡ್ಡಾಯವಾಗಿ ಶಾಲಾ ಬಸ್‌ ಎಂದು ಬರೆದಿರಬೇಕು.
- ವಿದ್ಯಾಸಂಸ್ಥೆಗಳು ಶಾಲಾ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದರೆ ಬಸ್‌ ಶಾಲಾ ಕರ್ತವ್ಯದಲ್ಲಿದೆ ಎಂಬ ಮಾಹಿತಿಯನ್ನು ಬಸ್ಸಿನಲ್ಲಿ ಪ್ರದರ್ಶಿಸಬೇಕು.
- ಶಾಲಾ ಬಸ್ಸಿಗೆ ನಿಗದಿಪಡಿಸಿದ ಆಸಗಳಿಗಿಂತ ಹೆಚ್ಚು ಆಸನಗಳನ್ನು ಅಳವಡಿಸಬಾರದು
- ಪ್ರಥಮ ಚಿಕಿತ್ಸಾ ಬಾಕ್ಸ್‌, ಅಗ್ನಿನಂದಕವನ್ನು ಹೊಂದಿರಬೇಕು
- ಬಸ್ಸುಗಳ ಆಯತಾಕಾರದ ಕಿಟಕಿಗಳಿಗೆ ಕಬ್ಬಿಣದ ಸರಳುಗಳನ್ನು ಅಳವಡಿಸಿರಬೇಕು
- ಶಾಲೆಯ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು
- ಬಸ್ಸಿನ ಬಾಗಿಲುಗಳು ಸಮರ್ಪಕ ಲಾಕ್‌ ಹೊಂದಿರಬೇಕು
- ಬಸ್‌ಗಳ ಚಾಲಕರು 5 ವರ್ಷಗಳ ಘನ ವಾಹನ ಚಾಲನಾ ಅನುಭವ ಹೊಂದಿರಬೇಕು ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ದಾಖಲೆ ಹೊಂದಿರಬಾರದು.
- ಸೀಟುಗಳ ಕೆಳಭಾಗದಲ್ಲಿ  ಶಾಲಾ ಬ್ಯಾಗ್‌ಗಳನ್ನು ಇರಿಸಲು ವ್ಯವಸ್ಥೆ ಇರಬೇಕು
- ಬಸ್‌ಗಳಲ್ಲಿ ಶಾಲಾ ಬೆಂಗಾವಲು ಇರಬೇಕು ಹಾಗೂ ಶಿಕ್ಷಕರೋರ್ವರು ಸುರಕ್ಷತಾ ಕ್ರಮವನ್ನು ಪರಿಶೀಲನೆ ನಡೆಸಬೇಕು.
- ಮಕ್ಕಳ ರಕ್ತ ಮಾದರಿಯ ಮಾಹಿತಿ ಇರಬೇಕು.

ಖಾಸಗಿ ವಾಹನಗಳು ಕರಾರಿನ ಮೇರೆಗೆ ಸಾರಿಗೆ ಸೌಲಭ್ಯ ಒದಗಿಸಬೇಕಾದರೆ…
- ಮೋಟಾರು ವಾಹನ ಕಾಯಿದೆ 1988 ಕಲಂ 74ರ ಪ್ರಕಾರ ವಾಹನ ರಹದಾರಿ ಹೊಂದಿರಬೇಕು
- ವಾಹನದ ಆಸನ ಸಾಮರ್ಥ್ಯ 12+1ಗೆ ಮೀರ ದಂತೆ ಇರಬೇಕು. ನಿಗದಿತ ಆಸನ ಸಾಮರ್ಥ್ಯ ಬದಲಾವಣೆ ಮಾಡಿರಬಾರದು
- ಅನುಮೋದಿತ ಸ್ಪೀಡ್‌ ಗವರ್ನರ್‌ ಅಳ ವಡಿ ಸಿದ್ದು, ವೇಗಮಿತಿ 40 kಞಟಜ ನಿಯಂತ್ರಿತ ವಾಗುವಂತೆ ಇರಬೇಕು.
- ವಾಹನವು ನೋಂದಣಿ ದಿನಾಂಕದಿಂದ 15 ವರ್ಷ ಮೀರಿರಬಾರದು
- ವಾಹನಕ್ಕೆ ಹೆದ್ದಾರಿ ಹಳದಿ ಬಣ್ಣ ಬಳಿಯಬೇಕು 

ಹಲವು ವಿದ್ಯಾಸಂಸ್ಥೆಗಳು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು ಮರಳಿ ಬಿಡಲು ಶಾಲಾ ವಾಹನದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತವೆ. ಆದರೆ ಶಾಲಾ ವಾಹನಗಳಲ್ಲಿ ಬರುವ ಮಕ್ಕಳ ಪ್ರಮಾಣ ಶೇ. 25ರಷ್ಟು ಮಾತ್ರ ಇದೆ. ಉಳಿದಂತೆ ಶೇ. 70ರಷ್ಟು ಮಕ್ಕಳು ಸರಕಾರಿ ಬಸ್‌ಗಳು, ಖಾಸಗಿ ಬಾಡಿಗೆ ನಡೆಸುವ ರಿಕ್ಷಾ, ಜೀಪುಗಳನ್ನು ಅವಲಂಬಿಸಿದ್ದಾರೆ. ಗ್ರಾಮಾಂತರದಿಂದ ಶಾಲೆಗೆ ತೆರಳುವ ಮಕ್ಕಳು ಈ ವ್ಯವಸ್ಥೆಗಳನ್ನೇ ಹೆಚ್ಚಾಗಿ ಅವಲಂಬಿತರಾಗಿದ್ದಾರೆ.

Advertisement

ಖಾಸಗಿ ಬಾಡಿಗೆ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ಸಂಖ್ಯೆಯ ಕುರಿತಂತೆ ಸಾಕಷ್ಟು ಗೊಂದಲಗಳಿವೆ. ಮಕ್ಕಳು ವಾಹನಗಳಲ್ಲಿ ನೇತಾಡುವಷ್ಟು ಕೊಂಡೊಯ್ಯುವುದು ಹಾಗೂ ಆ ವಾಹನಗಳಲ್ಲಿ ಸುರಕ್ಷತೆಯ ಭದ್ರತೆ ಇಲ್ಲದಿರುವುದು ಚರ್ಚೆಯ ವಿಚಾರ. ಆದರೆ ಹಲವು ಮಂದಿಗೆ ಇದೇ ಹೊಟ್ಟೆ ಹೊರೆಯುವ ಹಾದಿ. 
ಪ್ರಸ್ತುತ ವಾಹನಗಳ ಟ್ಯಾಕ್ಸ್‌, ಇನ್ಶೂರೆನ್ಸ್‌ ಹೆಚ್ಚಳವಾಗಿರುವುದು ಹೊರೆಯಾಗಿರುವುದರಿಂದ ಮಕ್ಕಳನ್ನು ಸಾಗಿಸುವ ನಿಯಮದಲ್ಲಿ ಸಡಿಲಿಕೆ ಮಾಡಿಕೊಳ್ಳಬೇಕೆಂಬ ಒತ್ತಾಯವೂ ವಾಹನಗಳ ಮಾಲಕರ ಕಡೆಯಿಂದ ಇದೆ.

– ರಸ್ತೆ ಸುರಕ್ಷೆ  ಜೀವನಶೈಲಿಯಾಗಲಿ
ನಿಯಮಗಳನ್ನು ಹಳ್ಳಿ – ನಗರ, ಶ್ರೀಮಂತ -ಬಡವ ಎಂದು ಪ್ರತ್ಯೇಕಿ ಸಲು ಸಾಧ್ಯವಿಲ್ಲ ಅಥವಾ ಮಾನವೀಯತೆಯಿಂದ ನೋಡಲೂ ಸಾಧ್ಯ ವಿಲ್ಲ. ಒಂದು ಜೀವಕ್ಕೆ ಹಣದ ರೂಪದ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಕಾರಣ ದಿಂದ ಮಕ್ಕಳ ಸುರಕ್ಷೆಗಾಗಿ ಇರುವ ಶಾಲಾ ವಾಹನಗಳ ನಿಯಮ ಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ರಸ್ತೆ ಸುರಕ್ಷೆ ಎಂಬುದು ಜೀವನ ಶೈಲಿ ಯಾಗಬೇಕು. ಆಗ ಮಾತ್ರ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಇದು ಐಎಎಸ್‌ ಅಧಿಕಾರಿ, ಹಿಂದಿನ ಪುತ್ತೂರು ಸಹಾಯಕ ಕಮಿಷನರ್‌ ಡಾ| ರಾಜೇಂದ್ರ ಕೆ.ವಿ. ಅವರು ಸುರಕ್ಷತೆಯ ಕುರಿತ ಸಭೆಯಲ್ಲಿ  ಹೇಳಿದ ಮಾತು.

– ಸಮನ್ವಯ ಅಗತ್ಯ
ಮಕ್ಕಳ ಸುರಕ್ಷತೆಯ ಶಾಲಾ ಪ್ರಯಾಣದ ದೃಷ್ಟಿಯಿಂದ ಶಾಲೆಗಳು, ಪೋಷಕರು, ಪೊಲೀಸ್‌ ಇಲಾಖೆ, ಆರ್‌ಟಿಒ ಸಮನ್ವಯತೆಯ ಜವಾ ಬ್ದಾರಿ ತೋರಬೇಕು. ಪ್ರತಿ ಬಾರಿಯೂ ಮಾತನಾಡಿ ಆ ಬಳಿಕ ಮರೆಯು ತ್ತೇವೆ. ಹಾಗಾಗದೆ ಗಂಭೀರ ವಿಚಾರವಾಗಿ ಪರಿಗಣಿಸಿ ಕ್ರಮಗಳನ್ನು ಅನುಷ್ಠಾನಿಸ ಬೇಕು. ಈ ಕುರಿತು ಈಗಾಗಲೇ ಇಲಾಖೆಯಿಂದ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.
– ಭೂಷಣ್‌ ಜಿ. ಬೊರಸೆ, ದ.ಕ. ಜಿಲ್ಲಾ  ಎಸ್‌ಪಿ

– ಶಾಲೆಗಳಿಗೆ ಸೂಚನೆ
ಶಾಲಾ ವಾಹನಗಳಲ್ಲಿ ಸುರಕ್ಷತೆಯ ಕುರಿತಂತೆ ಕ್ರಮ ಕೈಗೊಳ್ಳಲು ಸ್ಪಷ್ಟ ಸೂಚನೆ ರವಾನಿಸಲಾಗಿದೆ. ಶಾಲೆಗಳಲ್ಲಿರುವ ಮಕ್ಕಳ ಸುರಕ್ಷಾ ಸಮಿತಿಯ ಸಭೆ ಕರೆಯಬೇಕು. ಈ ಸಮಿತಿಯಲ್ಲಿ ವಾಹನಗಳಲ್ಲಿ ಬರುವ ಮಕ್ಕಳ ಮಾಹಿತಿ, ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ಇರಬೇಕು. ಸುರಕ್ಷತೆಗೆ ಸಂಬಂಧಿಸಿದಂತೆ ಇಲಾಖೆಯ ನೋಡೆಲ್‌ ಅಧಿಕಾರಿಯಾಗಿ ಕುಕ್ಕ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೂಲಕ ಪೊಲೀಸ್‌ ಇಲಾಖೆಗೂ ಮಾಹಿತಿ ನೀಡಲಾಗುತ್ತದೆ. ಪೋಷಕರೂ ಸಹ ಶಾಲಾ ವಾಹನದಲ್ಲಿ ವಾರದಲ್ಲಿ ಒಂದು ದಿನ ತೆರಳಿ ಸುರಕ್ಷತೆಯ ಕುರಿತು ಪರಿಶೀಲನೆ ಮಾಡಿಕೊಳ್ಳಲು ಅವಕಾಶವಿದೆ.
– ಶಶಿಧರ್‌ ಜಿ.ಎಸ್‌., ಪುತ್ತೂರು ಬಿಇಒ

– ಸಾರಿಗೆ ಇಲಾಖೆಯಿಂದ ಜಾಗೃತಿ
ಶಾಲಾ ವಾಹನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಿಸುವ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಾರಿಗೆ ಇಲಾಖೆ ನಿಯಮಗಳನ್ನು ನಿರ್ದೇ ಶನ ಮಾಡಿದೆ. ನಿಯಮಗಳನ್ನು ಮೀರಿದವರು ಶಿಕ್ಷೆಯ ದಂಡ ತೆರ ಬೇಕಾಗು ತ್ತದೆ. ಈ ಕುರಿತಂತೆ ಅಗತ್ಯ ಜಾಗೃತಿಯನ್ನು ಇಲಾಖೆಯ ಕಡೆಯಿಂದ ಮಾಡಲಾಗುತ್ತಿದೆ.    – ಶ್ರೀಧರ್‌ ರಾವ್‌, ಪ್ರಭಾರ ಆರ್‌ಟಿಒ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next