Advertisement

ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಬಿಂದುಗೆ ಬೈಗುಳ

06:10 PM Apr 27, 2019 | Team Udayavani |

ತಿರುವನಂತಪುರ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಕೇರಳ ಶಾಲೆ ಶಿಕ್ಷಕಿ ಬಿಂದು ತಂಕಮ್‌ ಕಲ್ಯಾಣಿಗೆ ಬುಧವಾರ ನಡೆದ ಮತದಾನದ ಚುನಾವಣಾ ಕರ್ತವ್ಯದಲ್ಲಿದ್ದಾಗ ಬೈಗುಳದ ಸುರಿಮಳೆಯಾಗಿದೆ. ಪಟ್ಟಾಂಬಿಯಲ್ಲಿ ಇವರು ಚುನಾವಣೆಗೆ ರಿಸರ್ವ್‌ ಅಧಿಕಾರಿಯಾಗಿ ನಿಯೋಜಿತರಾಗಿದ್ದರು.

Advertisement

‘ಮತಹಾಕಲು ಆಗಮಿಸಿದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದು ನಾನೇ ಅಲ್ಲವೆ ಎಂದು ಖಚಿತಪಡಿಸಿ ಕೊಳ್ಳಲು ದುರುಗುಟ್ಟಿ ನೋಡಿದರು. ಅನಂತರ ಕರ್ತವ್ಯ ಮುಗಿಸಿ ತೆರಳುತ್ತಿದ್ದಾಗ ಬಂದು ಬೈಯಲು ಆರಂಭಿಸಿದರು’ ಎಂದು ಬಿಂದು ಹೇಳಿದ್ದಾರೆ. ಈ ಪೈಕಿ ಒಬ್ಬನಂತೂ ‘ನೀನು ಯಾಕೆ ಸಾಯಬಾರದು’ ಎಂದೂ ಕೇಳಿದ್ದಾನೆ ಎಂದು ಬಿಂದು ಆರೋಪಿಸಿದ್ದಾರೆ. ಹೀಗಾಗಿ ನಾನು ಸಹಾ ಯಕ ಚುನಾವಣ ಅಧಿಕಾರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next