Advertisement

ಶಾಲಾರಂಭ : ಮತ್ತೆ ಗೊಂದಲ

12:40 AM Dec 23, 2020 | mahesh |

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಜ. 1ರಿಂದ ಎಸೆಸೆಲ್ಸಿ ಮತ್ತು ಪಿಯು ತರಗತಿ ಆರಂಭಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ರಾಜ್ಯ ಸರಕಾರ ಮುಳುಗಿದೆ. ಕೋವಿಡ್ ತಾಂತ್ರಿಕ ಸಮಿತಿ ಈ ಸಂಬಂಧ ಶೀಘ್ರವೇ ಇನ್ನೊಂದು ಶಿಫಾರಸು ನೀಡಲಿದ್ದು, ಆದನ್ನು ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

Advertisement

ಸದ್ಯ ಈಗಾಗಲೇ ಘೋಷಿಸಿರುವಂತೆ ಜ. 1ಕ್ಕೆ ಎಸೆಸೆಲ್ಸಿ ಹಾಗೂ ಪಿಯು ತರಗತಿಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಆದರೆ ಈ ನಡುವೆಯೇ ಸಲಹಾ ಸಮಿತಿಯು ಎರಡನೇ ಅಲೆ ಅಪಾಯ ಕುರಿತು ಎಚ್ಚರಿಸಿದೆ. ವೈರಸ್‌ ರೂಪಾಂತರದ ಆತಂಕವೂ ಇರು ವುದರಿಂದ ಶಾಲಾರಂಭದ ನಿರ್ಣಯ ವನ್ನು ಸರಕಾರ ಪುನರ್‌ ಪರಿಶೀಲಿಸಲಿದೆ ಎನ್ನಲಾಗಿದೆ.

ಇಂಗ್ಲೆಂಡ್‌ನ‌ಲ್ಲಿ ಪತ್ತೆಯಾಗಿರುವ ರೂಪಾಂತ ರಿತ ವೈರಾಣು ಹೆಚ್ಚು ವೇಗವಾಗಿ ಹರಡುತ್ತದೆ ಎನ್ನ ಲಾಗಿದೆ. ಹೀಗಾಗಿ ಶಾಲಾರಂಭದ ದಿನಾಂಕದ ಬಗ್ಗೆ ಇನ್ನೊಮ್ಮೆ ಸಮಿತಿ, ಸಿಎಂ ಜತೆಗೆ ಚರ್ಚಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ತಿಳಿಸಿದ್ದಾರೆ.

ನಡೆದಿದೆ ಸಿದ್ಧತೆ
ಈ ಮಧ್ಯೆ, ಜ. 1ರಿಂದ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ 6ರಿಂದ 9ನೇ ತರಗತಿಗೆ ವಿದ್ಯಾಗಮ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಶಾಲಾರಂಭ ಇನ್ನಷ್ಟು ದಿನ ಮುಂದೂಡಿಕೆಯಾಗುವ ಸಾಧ್ಯತೆ ಇಲ್ಲದಿಲ್ಲ. ಆದರೆ ವಿದ್ಯಾಗಮ ಜ.1ರಿಂದ ಆರಂಭವಾಗಲಿದೆ. ಶಾಲಾರಂಭ ಮುಂದೂಡಲ್ಪಟ್ಟರೆ ಎಸೆಸೆಲ್ಸಿಗೂ ವಿದ್ಯಾಗಮ ನಡೆಸುವ ಸಾಧ್ಯತೆಯಿದೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಫೆಬ್ರವರಿ ವರೆಗೆ ಸಿಬಿಎಸ್‌ಇ ಪರೀಕ್ಷೆ ಇಲ್ಲ
ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ)ಯ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿವರೆಗೆ ನಡೆಸುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಕೊರೊನಾ ಪರಿಸ್ಥಿತಿ ಆಧರಿಸಿ ಮತ್ತು ವಿಸ್ತೃತ ಸಮಾಲೋಚನೆಯ ಬಳಿಕವೇ ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸಲಾಗುವುದು ಎಂದಿದ್ದಾರೆ.

Advertisement

ಮಕ್ಕಳ ಹಿತದೃಷ್ಟಿಯಿಂದ ಶಾಲಾರಂಭಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಶಾಲಾರಂಭವು ಸುರಕ್ಷಿತವಾಗಿ, ಸುಲಲಿತವಾಗಿ ನಿರ್ವಹಣೆಯಾಗಲಿದೆ.
-ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next