Advertisement

ಕೋವಿಡ್-19 ರಜೆ ಸಮಯದಲ್ಲೂ ಗಿಡಗಳಿಗೆ ನೀರುಣಿಸುತ್ತಿರುವ ಶಿಕ್ಷಕಿ

10:45 AM Apr 07, 2020 | keerthan |

ಗಂಗಾವತಿ: ಸರಕಾರಿ ವಿವಿಧ ಇಲಾಖೆಯ ಕೆಲ ನೌಕರರಿಗೆ ರಜೆ ಸಿಕ್ಕರೆ ಸಾಕು ಮನೆ ಕುಟುಂಬ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಶಿಕ್ಷಕಿ ರಜೆಯ ಸಮಯದಲ್ಲೂ ಶಾಲೆಯ ಗಿಡಗಳಿಗೆ ನೀರುಣಿಸುತ್ತಿದ್ದಾರೆ.

Advertisement

ತಾಲೂಕಿನ ಸಂಗಾಪೂರ ಶ್ರೀ ರಂಗದೇವರಾಯಲು ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 150 ಗಿಡಗಳನ್ನು ಬೆಳೆಸಲಾಗಿದೆ. ಇವುಗಳಿಗೆ ಪ್ರತಿನಿತ್ಯ ಇಲ್ಲಿನ ಮುಖ್ಯ ಶಿಕ್ಷಕಿ ಪುಷ್ಪಾವತಿ ತಿರುಪಾಲಯ್ಯ ಅವರು ಪ್ರತಿದಿನ ಶಾಲೆಗೆ ಆಗಮಿಸಿ ನಿತ್ಯದ ಶಾಲೆಯ ಕೆಲಸದ ಜತೆ ಗಿಡಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿದ್ದಾರೆ.

ಈ ಕಾರ್ಯ ಇತರರಿಗೆ ಮಾದರಿಯಾಗಿದ್ದು ರಜೆ ಸಮಯದಲ್ಲೂ ಪರಿಸರ ಸಂರಕ್ಷಣೆಯ ಕಾರ್ಯ ಮಾಡುವ ಮೂಲಕ ಪರಿಸರ ಅಸಮತೋಲನ ನಿವಾರಣೆಗೆ ಪ್ರೇರಣೆಯಾಗಿದೆ.

ಕೋವಿಡ್-19 ಕರ್ಪ್ಯೂ ಒಟ್ಟು 21 ದಿನ ಇದ್ದು ಈ ಸಮಯದಲ್ಲಿ ನೀರಿಲ್ಲದೆ ಗಿಡ ಒಣಗದಂತೆ ನೋಡಿಕೊಳ್ಳುತ್ತಿರುವ ಶಿಕ್ಷಕಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next