Advertisement

Shirva: ಬಿರುಕು ಬಿಟ್ಟ ರಸ್ತೆ; ಶಾಲಾ ಮಕ್ಕಳ ವಾಹನಗಳ ರಸ್ತೆ ಬದಲಿಸಲು ಮನವಿ

03:05 PM Jul 06, 2023 | Team Udayavani |

ಶಿರ್ವ: ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ-ಭದ್ರಮಾ-ಕುಂತಳನಗರ ಸಂಪರ್ಕ ರಸ್ತೆಯಲ್ಲಿ ಪಾಪನಾಶಿನಿ ನದಿಗೆ ನಿರ್ಮಿಸಲಾದ ಸೇತುವೆಯ ಕೂಡು ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು,ಸುರಿದ ಭಾರೀ ಮಳೆಗೆ ರಸ್ತೆ ಬಿರುಕು ಬಿಟ್ಟು ಅಪಾಯದ ಭೀತಿ ಎದುರಾಗಿದೆ.

Advertisement

ಗ್ರಾ.ಪಂ. ಮನವಿ

ಹೊಸದಾಗಿ ನಿರ್ಮಾಣಗೊಂಡ ಪಡುಬೆಳ್ಳೆ-ಭದ್ರಮಾ-ಕುಂತಳನಗರ ರಸ್ತೆಯು ಮಳೆಗಾಲದಲ್ಲಿ ಅಪಾಯದ ಸ್ಥಿತಿಯಲ್ಲಿರುವುದರಿಂದ ಪರಿಸರದ ವಿದ್ಯಾಸಂಸ್ಥೆಗಳು ತಮ್ಮ ಶಾಲಾ ಮಕ್ಕಳ ವಾಹನವನ್ನು ಈ ರಸ್ತೆಯಲ್ಲಿ ಸಂಚರಿಸದಂತೆ ಮತ್ತು ಬದಲಿ ವ್ಯವಸ್ಥೆ ಅನುಸರಿಸಲು ಬೆಳ್ಳೆ ಗ್ರಾ.ಪಂ. ಆಡಳಿತ ಪತ್ರ ಬರೆದಿದ್ದು, ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಜಾಗರೂಕರಾಗಿರುವಂತೆ ಗ್ರಾ.ಪಂ.ಮನವಿ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next