Advertisement

ಮದುವೆಗೆ ಸಂಬಂಧಿಕರನ್ನು ಆಮಂತ್ರಿಸಲು ತೆರಳುತ್ತಿದ್ದ ವ್ಯಕ್ತಿಗೆ ಶಾಲಾ ಬಸ್ ಡಿಕ್ಕಿ: ಸಾವು

09:40 AM Nov 01, 2019 | Team Udayavani |

ಬೆಂಗಳೂರು: ಮೊಮ್ಮಗನ ಮದುವೆಗೆ ಸಂಬಂಧಿಕರನ್ನು ಆಮಂತ್ರಿಸಲು ಹೋಗುತ್ತಿದ್ದ ನಂದಿನಿ ಲೇಔಟ್​ನ ಬಸವರಾಜಯ್ಯ ಅವರಿಗೆ ಶಾಲಾ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ನ. 10ರಂದು ಮೊಮ್ಮಗನ ಮದುವೆ ಸಮಾರಂಭ ಇದ್ದ ಹಿನ್ನಲೆ  ನೆಂಟರು, ಗೆಳೆಯರನ್ನು ಮದುವೆಗೆ ಆಹ್ವಾನಿಸಲು ಹೋಗಿದ್ದರು.

ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ಬಸವರಾಜಯ್ಯ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.

ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next