Advertisement

Scandal: ಸಚಿವರಾದ ಪ್ರಿಯಾಂಕ್‌, ಕೆ.ಎನ್‌.ರಾಜಣ್ಣ ಮೇಲೆ ಹಗರಣದ ತೂಗುಗತ್ತಿ

04:53 PM Sep 25, 2024 | Team Udayavani |

ಬೆಂಗಳೂರು: ಮುಡಾ ಹಗರಣದ ಬೆನ್ನಲ್ಲೇ ಸರಕಾರದ ಎದುರು ಸಾಲು ಸಾಲು ಸವಾಲುಗಳಿದ್ದು, ಮುಖ್ಯಮಂತ್ರಿ ವಿರುದ್ಧದ ಅರ್ಕಾವತಿ ಡಿ-ನೋಟಿಫಿಕೇಶನ್‌, ಸಿದ್ಧಾರ್ಥ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಸಿಎ ನಿವೇಶನ ಪಡೆದ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧದ ಪ್ರಕರಣ ಹಾಗೂ ಸಚಿವ ಕೆ.ಎನ್‌. ರಾಜಣ್ಣ ಅವರ ವಿರುದ್ಧ ಅಪೆಕ್ಸ್‌ ಬ್ಯಾಂಕ್‌ ಹಗರಣದ ತೂಗುಗತ್ತಿ ನೇತಾಡಲು ಆರಂಭಿಸಿದೆ.

Advertisement

ಸಿಎಂ ವಿರುದ್ಧದ ಮುಡಾ ಹಗರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್‌ 17(ಎ) ಅಡಿ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದೇ ಸರಿಯಲ್ಲ ಎಂದು ವಾದಿಸುತ್ತಿದ್ದ ಕಾಂಗ್ರೆಸ್‌ ಹಾಗೂ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ನಲ್ಲಿ ಹಿನ್ನಡೆ ಆಗಿದೆ. ಸಾಲದ್ದಕ್ಕೆ ರಾಜಭವನದೊಂದಿಗೆ ನೇರ ಸಂಘರ್ಷಕ್ಕೆ ರಾಜ್ಯ ಸರಕಾರವೂ ಇಳಿದಿದ್ದು, ರಾಜ್ಯಪಾಲರು ಸರಕಾರದಿಂದ ಅನೇಕ ಪ್ರಕರಣಗಳ ವಿವರಣೆ, ಮಾಹಿತಿ, ದಾಖಲೆ ಕೇಳಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಲೋಕಾಯುಕ್ತ, ಉಪಲೋಕಾಯುಕ್ತರ ಶಿಫಾರಸುಗಳ ಸ್ಥಿತಿಗತಿ ಬಗ್ಗೆಯೂ ಪ್ರಶ್ನಿಸಿದ್ದರು. ಪ್ರಮುಖವಾಗಿ ಸಿಎಂ ಹಾಗೂ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ ಅರ್ಜಿಗಳು ರಾಜ್ಯಪಾಲರ ಮುಂದೆ ಬಾಕಿ ಇದ್ದು, ಯಾವ ಕ್ಷಣದಲ್ಲಿ ಏನಾಗಲಿದೆ ಎಂಬುದೀಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next