Advertisement

ಜಲ್ಲಿಕಟ್ಟು ವಿರುದ್ಧದ ಅರ್ಜಿ ಸಂವಿಧಾನ ಪೀಠಕ್ಕೆ: ಸುಪ್ರೀಂ ಕೋರ್ಟ್‌

07:13 PM Dec 12, 2017 | udayavani editorial |

ಹೊಸದಿಲ್ಲಿ : ತಮಿಳು ನಾಡು ಮತ್ತು ಮಹಾರಾಷ್ಟ್ರ ಸರಕಾರಗಳು ಜಲ್ಲಿಕಟ್ಟು ಮತ್ತು ಎತ್ತಿನ ಗಾಡಿ ಓಟ ಓಟವೇ ಮೊದಲಾದ ಕ್ರೀಡೆಗಳಿಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ಇರಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಇಂದು ಹೇಳಿದೆ.

Advertisement

ಚೀಫ್ ಜಸ್ಟಿಸ್‌ ದೀಪಕ್‌ ಮಿಶ್ರಾ ಮತ್ತು ಜಸ್ಟಿಸ್‌ ಆರ್‌ ಎಫ್ ನಾರಿಮನ್‌ ಅವರನ್ನು ಒಳಗೊಂಡ ಪೀಠವು,  ಸಂವಿಧಾನದ 29(1) ವಿಧಿಯಡಿ ಕಲ್ಪಿಸಲಾಗಿರುವ ಸಾಂಸ್ಕೃತಿಕ ಹಕ್ಕನ್ನು ಬಳಸಿಕೊಂಡು ಜಲ್ಲಿಕಟ್ಟು, ಎತ್ತಿನ ಬಂಡಿಯ ಓಟವೇ ಮೊದಲಾದ ಕ್ರೀಡೆಗಳಿಗೆ ಅನುಮತಿ ನೀಡಲು ಕಾನೂನುಗಳನ್ನು ರೂಪಿಸುವ ಶಾಸನಾತ್ಮಕ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆಯೇ ಎಂಬುದನ್ನು ತೀರ್ಮಾನಿಸಲು ಈ ಕುರಿತ ಅರ್ಜಿಗಳನ್ನು ಸಂವಿಧಾನ ಪೀಠದ ತೀರ್ಮಾನಕ್ಕೆ ಸಲ್ಲಿಸಲಾಗುವುದು ಎಂದು ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next