Advertisement

ವೈದ್ಯರ ಸುರಕ್ಷೆ, ಭದ್ರತೆಗೆ ಮನವಿ: ಜೂನ್‌ 18ರಂದು ಸುಪ್ರೀಂ ಕೋರ್ಟ್‌ ವಿಚಾರಣೆ

09:51 AM Jun 18, 2019 | Sathish malya |

ಹೊಸದಿಲ್ಲಿ : ದೇಶಾದ್ಯಂತ ಸರಕಾರಿ ಅಸ್ಪತ್ರೆಗಳಲ್ಲಿ ದುಡಿಯುತ್ತಿರುವ ವೈದ್ಯರಿಗೆ ಸುರಕ್ಷೆ ಮತ್ತು ಭದ್ರತೆ ಸಿಗಬೇಕು ಎಂದು ಕೋರುವ ಮನವಿಯ ವಿಚಾರಣೆಯನ್ನು ಜೂ.18ರಂದು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಳ್ಳಲಿದೆ.

Advertisement

ಅರ್ಜಿದಾರರ ನ್ಯಾಯವಾದಿ ಅಲಖ್‌ ಆಲೋಕ್‌ ಶ್ರೀವಾಸ್ತವ ಅವರು ವೈದ್ಯರ ಮನವಿಯ ತುರ್ತು ವಿಚಾರಣೆಗೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ಜಸ್ಟಿಸ್‌ ದೀಪಕ್‌ ಗುಪ್ತಾ ಮತ್ತು ಜಸ್ಟಿಸ್‌ ಸೂರ್ಯಕಾಂತ್‌ ಅವರನ್ನು ಒಳಗೊಂಡ ರಜಾಕಾಲದ ಪೀಠ ಪುರಸ್ಕರಿಸಿ, ನಾಳೆ ಮಂಗಳವಾರ ಜೂನ್‌ 18ರಂದೇ ಮನವಿಯ ವಿಚಾರಣೆ ನಡೆಸುವುದಾಗಿ ಹೇಳಿತು.

ಕಳೆದ ಜೂನ್‌ 10ರಂದು ಕೋಲ್ಕತ ಆಸ್ಪತ್ರೆಯಲ್ಲಿ ಮೃತ ರೋಗಿಯೊಬ್ಬರ ಸಂಬಂಧಿಕರು ಕರ್ತವ್ಯ ನಿರತ ಜೂನಿಯರ್‌ ವೈದ್ಯರ ಮೇಲೆ ಹಲ್ಲೆ ನಡೆಸಿದುದನ್ನು ಪ್ರತಿಭಟಿಸಿ ಪಶ್ಚಿಮ ಬಂಗಾಲದಲ್ಲಿ ವೈದ್ಯರ ಮುಷ್ಕರ ನಡೆಯುತ್ತಿದ್ದಂತೆಯೇ, ಕಳೆದ ಶುಕ್ರವಾರ ಕರ್ತವ್ಯ ನಿರತ ವೈದ್ಯರ ಸುರಕ್ಷೆ ಮತ್ತು ಭದ್ರತೆ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next