Advertisement

ಯುನಿಟೆಕ್‌ ಹಸ್ತಾಂತರ : ಎನ್‌ಸಿಎಲ್‌ಟಿ ಆದೇಶಕ್ಕೆ ಸುಪ್ರೀಂ ತಡೆ

11:52 AM Dec 13, 2017 | |

ಹೊಸದಿಲ್ಲಿ : ಭಾರೀ ಸಾಲದ ಭಾರಕ್ಕೆ  ನಲುಗುತ್ತಿರುವ ಯುನಿಟೆಕ್‌ ಲಿಮಿಟೆಡ್‌ನ‌ ಆಡಳಿತೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಳ್ಳುವುದಕ್ಕೆ ಅವಕಾಶ ನೀಡುವ ಕಂಪೆನಿ ಕಾನೂನು ನ್ಯಾಯ ಮಂಡಳಿ ಎನ್‌ಸಿಎಲ್‌ಟಿ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಇಂದು ಬುಧವಾರ ತಡೆಯಾಜ್ಞೆ  ನೀಡಿದೆ. 

Advertisement

ತನ್ನ ನಿರ್ದೇಶಕರನ್ನು ಅಮಾನತುಗೊಳಿಸಿ ನಾಮಾಂಕಿತ ನಿರ್ದೇಶಕರನ್ನು ನೇಮಿಸುವ ಮೂಲಕ ಕಂಪೆನನಿಯ ಆಡಳಿತೆಯನ್ನು ಕೈಗೆತ್ತಿಕೊಳ್ಳುವುದಕ್ಕೆ ಕೇಂದ್ರ ಸರಕಾರಕ್ಕೆ ಅವಕಾಶ ನೀಡಿರುವ ಕಂಪೆನಿ ಕಾನೂನು ನ್ಯಾಯ ಮಂಡಳಿಯ ಆದೇಶವನ್ನು ಅಮಾನತುಗೊಳಿಸಬೇಕೆಂದು ಕೋರಿ ಯುನಿಟೆಕ್‌ ಕಂಪೆನಿ ಒಂದು ದಿನದ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಮೆಟ್ಟಲೇರಿತ್ತು. 

ಸುಪ್ರೀಂ ಕೋರ್ಟಿನ ಈ ಹಿಂದಿನ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಂಪೆನಿ ನ್ಯಾಯ ಮಂಡಳಿ ಈ ಆದೇಶವನ್ನು ಹೊರಡಿಸುವಂತಿಲ್ಲ ಎಂದು ಯುನಿಟೆಕ್‌ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು. 

ಕಂಪೆನಿ ಮಂಡಳಿಯಲ್ಲಿ ಹತ್ತು ಮಂದಿ ನಾಮಾಂಕಿತ ನಿರ್ದೇಶಕರನ್ನು ನೇಮಿಸುವುದಕ್ಕೆ ಮತ್ತು ಕಂಪೆನಿಯ ಆಡಳಿತೆಯನ್ನು ತನ್ಮೂಲಕ ಕೇಂದ್ರ ಸರಕಾರ ಕೈಗೆತ್ತಿಕೊಳ್ಳುವುದಕ್ಕೆ ಅವಕಾಶ ನೀಡುವ ಎನ್‌ಸಿಎಲ್‌ಟಿ ಆದೇಶವನ್ನು ಅಮಾನತು ಮಾಡುವಂತೆ ಯನಿಟೆಕ್‌ ಕೋರಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next