Advertisement

ಎಸ್ಸಿ, ಎಸ್ಟಿ ಬಡ್ತಿ: ಸಿದ್ದು ಜತೆ ನೌಕರರ ಚರ್ಚೆ

06:55 AM Nov 18, 2018 | |

ಬೆಂಗಳೂರು :ಎಸ್‌-ಎಸ್‌ಟಿ ಬಡ್ತಿ ಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ನೌಕರರ ಸಂಘದ ಪದಾಧಿಕಾರಿಗಳು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

Advertisement

ರಾಷ್ಟ್ರಪತಿಗಳಿಂದ ಅಂಗೀಕಾರಗೊಂಡ ಎಸ್‌ಸಿ-ಎಸ್‌ಟಿ ಬಡ್ತಿ ಮೀಸಲಾತಿ ವಿಧೇಯಕವನ್ನು ಕೂಡಲೇ ಜಾರಿ ಮಾಡಬೇಕು. ಬಡ್ತಿ ಮೀಸಲಾತಿ ವಿಧೇಯಕ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ವಿಧೇಯಕ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಶಿವಶಂಕರ, ಮೀಸಲಾತಿ ವಿಧೇಯಕ ಜಾರಿಗೆ ಸಚಿವ ಎಚ್‌.ಡಿ.ರೇವಣ್ಣ ಅಡ್ಡಗಾಲು ಹಾಕಿದ್ದಾರೆ. ಅವರ ಇಲಾಖೆಯಲ್ಲಿಯೇ  ಎಸ್‌ಸಿ-ಎಸ್‌ಟಿ ನೌಕರರ ಶೋಷಣೆ ನಡೆಯುತ್ತಿದೆ. ಮುಂಬಡ್ತಿ ಇದ್ದಂತ ನೌಕರರಿಗೆ ಹಿಂಬಡ್ತಿ ನೀಡಿ ವೇತನ ಕಡಿತಗೊಳಿಸಲಾಗಿದೆ ಎಂದು ದೂರಿದರು.

ಎಸ್‌ಸಿ-ಎಸ್‌ಟಿ ವಿಧೇಯಕ ಜಾರಿಗೊಳಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಎಚ್‌.ಡಿ.ರೇವಣ್ಣ ಬಿಡುತ್ತಿಲ್ಲ.ಹೀಗಾಗಿ, ನಾವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next