Advertisement

ಸಿಬಿಐ ಡಿವೈಎಸ್ಪಿ ಬಸ್ಸಿ ವರ್ಗಾವಣೆ: ಕೇಂದ್ರಕ್ಕೆ ಸುಪ್ರೀಂ ನೊಟೀಸ್‌

06:07 AM Feb 01, 2019 | Team Udayavani |

ಹೊಸದಿಲ್ಲಿ : ತನ್ನನ್ನು ಪೋರ್ಟ್‌ ಬ್ಲೇರ್‌ ಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿರುವ ಸಿಬಿಐ ಡೆಪ್ಯುಟಿ ಸುಪರಿಂಟೆಂಡೆಂಟ್‌ ಆಫ್ ಪೊಲೀಸ್‌ ಎ ಕೆ ಬಸ್ಸಿ ಅವರ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿ ಉತ್ತರ ಕೇಳಿದೆ. 

Advertisement

ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ಜಸ್ಟಿಸ್‌ ಸಂಜೀವ್‌ ಖನ್ನ ಅವರನ್ನು ಒಳಗೊಂಡ ಪೀಠವು, ಆರು ವಾರಗಳ ಒಳಗೆ ಉತ್ತರಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿತು.

ಅರ್ಜಿದಾರರ ಪರವಾಗಿ ಕೋರ್ಟಿನಲ್ಲಿ ಹಾಜರಿದ್ದ ಹಿರಿಯ ವಕೀಲ ರಾಜೀವ್‌ ಧವನ್‌, ಈ ಪ್ರಕರಣವು ಸಿಬಿಐ ಆಡಳಿತ ಶೈಲಯನ್ನು ಪ್ರಶ್ನಿಸುವಂತಿದೆ ಎಂದು ಹೇಳಿದರಲ್ಲದೆ ಈ ಪ್ರಕರಣವು ಸಿಬಿಐನ ತನಿಖಾ ಶುದ್ಧತೆಯನ್ನು ಕೂಡ ಬಾಧಿಸುತ್ತದೆ ಎಂದು ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next