Advertisement

ಗುರುಗ್ರಾಮ ಶಾಲಾ ಬಾಲಕನ ಕೊಲೆ: ಬಾಲಾಪರಾಧಿಗೆ ಜಾಮೀನು ಇಲ್ಲ

04:18 PM Jul 20, 2018 | udayavani editorial |

ಗುರುಗ್ರಾಮ : 2017ರಲ್ಲಿ ಗುರುಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ನಡೆದಿದ್ದ  ಏಳು ವರ್ಷ ಪ್ರಾಯದ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕನ ತಂದೆ, ಪುತ್ರನ ಪರವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ಶುಕ್ರವಾರ ತಿರಸ್ಕರಿಸಿದೆ. 

Advertisement

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ ಶೀಟ್‌ ಸಲ್ಲಿಕೆಗಿರುವ 60 ದಿನಗಳ ಗಡುವು ಮುಗಿದಿದ್ದು ಇನ್ನೂ ಚಾರ್ಜ್‌ ಶೀಟ್‌ ಸಲ್ಲಿಕೆಯಾಗದಿರುವ  ಕಾರಣ ತನ್ನ ಪುತ್ರನಾಗಿರುವ ಆರೋಪಿ ಬಾಲಕನಿಗೆ ಜಾಮೀನು ನೀಡಬೇಕು ಎಂದು ಆರೋಪಿಯ ತಂದೆ ವಾದಿಸಿದ್ದರು. 

ಇದಕ್ಕೆ ಸುಪ್ರೀಂ ಕೋರ್ಟ್‌, “ಇದೊಂದು ಕೊಲೆ ಪ್ರಕರಣ; ಆರೋಪ ಸಾಬೀತಾದರೆ ಜೀವಾವಧಿ ಜೈಲು ಶಿಕ್ಷೆಯಾಗುತ್ತದೆ; ಹಾಗಾಗಿ ಚಾರ್ಜ್‌ ಶೀಟ್‌ ಸಲ್ಲಿಕೆಗೆ 90 ದಿನಗಳ ಕಾಲಾವಕಾಶ ಇದೆ’ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು. 

2017ರ ಸೆ.8ರಂದು ಖಾಸಗಿ ಶಾಲೆಯ ಎರಡನೇ ತರಗತಿಯ ಏಳು ವರ್ಷದ ಬಾಲಕನ ಕತ್ತು ಸೀಳಲ್ಪಟ್ಟ ಮೃತ ದೇಹ ಶಾಲೆಯ ಶೌಚಾಲಯದ ಒಳಗೆ ಪತ್ತೆಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next