Advertisement

ಯುನಿಟೆಕ್‌ ಪ್ರಮೋಟರ್‌ಗಳಿಗೆ ಬೇಲ್‌ ಇಲ್ಲ : ಸುಪ್ರೀಂ ಕೋರ್ಟ್‌

11:27 AM Jan 23, 2019 | |

ಹೊಸದಿಲ್ಲಿ : ಗೃಹ ಖರೀದಿದಾರರ ಹಣ ನುಂಗಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಕಳೆದ ಒಂದೂವರೆ ವರ್ಷದಿಂದ ದಿಲ್ಲಿಯ ತಿಹಾರ್‌ ಜೈಲಿನಲ್ಲಿರುವ ಯುನಿಟೆಕ್‌ ಪ್ರಮೋಟರ್‌ಗಳಾದ ಸಂಜಯ್‌ ಚಂದ್ರ ಮತ್ತು ಅಜಯ್‌ ಚಂದ್ರ ಅವರಿಗೆ ಸುಪ್ರೀಂ ಕೋರ್ಟ್‌ ಇಂದು ಬುಧವಾರ ಜಾಮೀನು ನಿರಾಕರಿಸಿದೆ. 

Advertisement

ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯಲ್ಲಿ 750 ಕೋಟಿ ರೂ.ಗಳನ್ನು ಠೇವಣಿ ಇರಿಸುವಂತೆ 2017ರ ಅ.30ರಂದು ಹೊರಡಿಸಲಾಗಿದ್ದ ಆದೇಶವನ್ನು ಆರೋಪಿಗಳು ಪಾಲಿಸಿಲ್ಲ; ಹಾಗಾಗಿ ಅವರಿಗೆ ಜಾಮೀನು ಮಂಜೂರು ಮಾಡಲಾಗದು ಎಂದು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಮತ್ತು ಹೇಮಂತ್‌ ಗುಪ್ತಾ ಅವರನ್ನು ಒಳಗೊಂಡ ಪೀಠ ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next