Advertisement

ಸುಕೇಶ್ ಚಂದ್ರಶೇಖರ್ ತಿಹಾರ್‌ನಿಂದ ಮಂಡೋಲಿ ಜೈಲಿಗೆ ಸ್ಥಳಾಂತರ: ಸುಪ್ರೀಂ ಆದೇಶ

03:03 PM Aug 23, 2022 | Team Udayavani |

ನವದೆಹಲಿ: ಬಹುಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಮತ್ತು ಅವನ ಪತ್ನಿಯನ್ನು ತಿಹಾರ್ ಜೈಲಿನಿಂದ ನಗರದ ಮಂಡೋಲಿ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

Advertisement

ನ್ಯಾಯಮೂರ್ತಿಗಳಾದ ಎಸ್ ಆರ್ ಭಟ್ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಚಂದ್ರಶೇಖರ್ ಮತ್ತು ಅವನ ಪತ್ನಿ ತಮ್ಮ ಜೀವ ಬೆದರಿಕೆಯನ್ನು ಆರೋಪಿಸಿ ದೆಹಲಿಯ ಹೊರಗಿನ ಜೈಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಯ ಮೇಲೆ ಈ ಆದೇಶವನ್ನು ನೀಡಿದೆ.

ಚಂದ್ರಶೇಖರ್ ಉದ್ದೇಶಪೂರ್ವಕವಾಗಿ ಹಣ ವರ್ಗಾವಣೆ ಮತ್ತು ಹಲವರಿಗೆ ವಂಚಿಸಿದ ಆರೋಪದ ಮೇಲೆ ಜೈಲು ಪಾಲಾಗಿದ್ದು, “ದಾಖಲೆಯಲ್ಲಿರುವ ವಸ್ತುಗಳನ್ನು ಪರಿಗಣಿಸಿ ಮತ್ತು ಜೂನ್ 17, 2022 ರಂದು ಮಾಡಿದ ಆದೇಶವನ್ನು ಪರಿಗಣಿಸಿ, ನ್ಯಾಯಾಲಯವು ಜೂನ್ 23, 2022 ರಂದು ಪ್ರತಿವಾದಿಯು ನೀಡಿದ ಹೇಳಿಕೆಯ ಪ್ರಕಾರ, ಅರ್ಜಿದಾರರನ್ನು ಮಂಡೋಲಿ ಜೈಲಿಗೆ ವರ್ಗಾಯಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಎಂದು ಪೀಠ ಹೇಳಿದೆ.

ಇಬ್ಬರರನ್ನು ಒಂದು ವಾರದೊಳಗೆ ಮಂಡೋಲಿ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. “ಇದು ಇಬ್ಬರಿಗೂ ಆದೇಶವಾಗಿದೆ” ಎಂದು ಪೀಠವು ಮೌಖಿಕವಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next