Advertisement

ಮಾರ್ಕಂಡೇಯ ಜಲ ವಿವಾದ ನ್ಯಾಯಾಧಿಕರಣಕ್ಕೆ ಗಡುವು

10:06 PM Dec 14, 2022 | Team Udayavani |

ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪೆನ್ನಯ್ನಾರ್‌ ನದಿ ವಿವಾದ ಸಂಬಂಧ ಮೂರು ತಿಂಗಳಲ್ಲಿ ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

Advertisement

ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಸಂಬಂಧ ಕರ್ನಾಟಕ ಸರ್ಕಾರ ಮಾರ್ಕಂಡೇಯ ನದಿಗೆ ಯರಗೋಳ್‌ ಗ್ರಾಮದ ಬಳಿ ಅಣೆಕಟ್ಟು ಕಟ್ಟಲು ಮುಂದಾಗಿದೆ. ರಾಜ್ಯ ಸರ್ಕಾರವು ಈ ಯೋಜನೆಗೆ ಬೇಕಾದ ಎಲ್ಲ ಅನುಮತಿಯನ್ನೂ ಪಡೆದಿದ್ದು, 240 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲು ತಯಾರಾಗಿದೆ. ಈ ಹಿಂದೆಯೇ ಕೇಂದ್ರ ಸರ್ಕಾರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ಆದರೂ, ತಮಿಳುನಾಡಿನ ವಿರೋಧದಿಂದಾಗಿ ಇತ್ಯರ್ಥವಾಗಿಲ್ಲ.

ಹೀಗಾಗಿ, ಈಗ ತಮಿಳುನಾಡು ನ್ಯಾಯಾಧಿಕರಣ ರಚನೆಗಾಗಿ ಸುಪ್ರೀಂಕೋರ್ಟ್‌ ಮುಂದೆ ಹೋಗಿತ್ತು. ವಿಚಾರಣೆ ವೇಳೆ ಕೇಂದ್ರ ಸರ್ಕಾರ ಪ್ರಕ್ರಿಯೆ ಮುಗಿಸುವ ಸಲುವಾಗಿ 6 ತಿಂಗಳ ಕಾಲಾವಕಾಶ ಕೇಳಿದರೂ, ಸುಪ್ರೀಂಕೋರ್ಟ್‌ ಒಪ್ಪಿಕೊಳ್ಳಲಿಲ್ಲ. ಕಡೆಗೆ 3 ತಿಂಗಳಲ್ಲಿ ಪ್ರಕ್ರಿಯೆ ಮುಗಿಸಬೇಕು ಎಂದು ಸೂಚನೆ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next