Advertisement

1,000 ಕೋಟಿ ಹೆಚ್ಚವರಿ ಠೇವಣಿ: ಜೆಎಎಲ್‌ಗೆ ಸುಪ್ರೀಂ ಆದೇಶ

04:03 PM May 16, 2018 | udayavani editorial |

ಹೊಸದಿಲ್ಲಿ : ತೊಂದರೆಗೀಡಾಗಿರುವ ಗೃಹ ಖರೀದಿದಾರರಿಗೆ ಮರು ಪಾವತಿ ಮಾಡುವ ಸಲುವಾಗಿ ಜೂನ್‌ 15ರೊಳಗೆ 1,000 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ತನ್ನ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಜೈಪ್ರಕಾಶ್‌ ಅಸೋಸಿಯೇಟ್ಸ್‌ ಲಿಮಿಟೆಡ್‌ (ಜೆಎಎಲ್‌) ಗೆ ಆದೇಶಿಸಿದೆ.

Advertisement

ಈ ಹೆಚ್ಚುವರಿ 1,000 ಕೋಟಿ ರೂ. ಮೊತ್ತವನ್ನು ಠೇವಣಿ ಇರಿಸಿದ ಬಳಿಕವೇ ಜೆಎಎಲ್‌ ನ ಉಪ ಸಂಸ್ಥೆಯಾಗಿರುವ ಜೇಪಿ ಇನ್‌ಫ್ರಾಟೆಕ್‌ ಲಿಮಿಟೆಡ್‌ (ಜೆಐಎಲ್‌) ಕಂಪೆನಿಯ ಲಿಕ್ವಿಡೇಶನ್‌ ಪ್ರಕ್ರಿಯೆಗೆ ನೀಡಲಾಗಿದ್ದ ತಡೆಯನ್ನು ಅಂತೆಯೇ ಉಳಿಸಿಕೊಳ್ಳಬಹುದಾಗಿದೆ ಎಂದು ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ಹೇಳಿದೆ. 

ಜೂನ್‌ 15ರ ಒಳಗಾಗಿ ಜೆಎಎಲ್‌ ಹೆಚ್ಚುವರಿ 1,000 ಕೋಟಿ ಮೊತ್ತವನ್ನು ಠೇವಣಿ ಇರಿಸದಿದ್ದರೆ, ಜೆಐಎಲ್‌ನ ದೀವಾಳಿ ಪ್ರಕ್ರಿಯೆಯು ಮುಂದುವರಿಯಲಿದೆ ಎಂದು ಜಸ್ಟಿಸ್‌ ಎ ಎಂ ಖಾನ್‌ವಿಲ್ಕರ್‌ ಮತ್ತು ಜಸ್ಟಿಸ್‌ ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠವು ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next