Advertisement

ಸಯಾನ್‌ ಜಿಎಸ್‌ಬಿ  ಸೇವಾ ಮಂಡಲ: ಉಚಿತ ಆಧ್ಯಾತ್ಮಿಕ ಶಿಬಿರ

04:15 PM May 30, 2018 | Team Udayavani |

ಮುಂಬಯಿ: ಜಿ. ಎಸ್‌. ಬಿ. ಸೇವಾ ಮಂಡಲ ಸಯಾನ್‌ ಇದರ ವತಿಯಿಂದ ಸಮಾಜದ ಉಪನಯನಗೊಂಡ ವಟುಗಳಿಗೆ ಉಚಿತ ಆಧ್ಯಾತ್ಮಿಕ ಶಿಬಿರವು ಮೇ 28 ರಂದು ಪ್ರಾರಂಭಗೊಂಡಿದ್ದು, ಜೂ. 3 ರವರೆಗೆ ಜರಗಲಿದೆ.

Advertisement

ಮಂಡಲದ ವತಿಯಿಂದ ವರ್ಷಂಪ್ರತಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಪ್ರಸ್ತುತ ವರ್ಷದ ಶಿಬಿರವು ಸಯಾನ್‌ನಲ್ಲಿರುವ ಸೇವಾ ಮಂಡಳದ ಶ್ರೀ ಗುರುಗಣೇಶ ಪ್ರಸಾದ ಸಭಾಗೃಹದಲ್ಲಿ ಚಾಲನೆಗೊಂಡಿತು.

ಮಂಗಳೂರಿನ ಪಂಡಿತ್‌ ನರಸಿಂಹ ಆರ್ಚಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಶಿಬಿರದಲ್ಲಿ ವೇದಮೂರ್ತಿ ಹರೀಶ್‌ ಭಟ್‌ ದಹಿಸರ್‌, ವೇದಮೂರ್ತಿ ವಿಜಯ ಭಟ್‌ ಅವರು ಸಹಕರಿಸುತ್ತಿದ್ದಾರೆ. ಜೂ. 3 ರಂದು ಶಿಬಿರದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌ ಅವರು ಸಂಚಾಲಕರಾಗಿರುವ ಈ ಶಿಬಿರದ ಶಿಬಿರಾರ್ಥಿಗಳಿಗೆ ಉಚಿತ ಊಟೋಪಚಾರದ ಮತ್ತು ವಸತಿ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ಸಮಾಜದ ಮಕ್ಕಳು ಇದರ ಸದುಪಯೋಗವನ್ನು ಪಡೆಯಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next