Advertisement

ಅಕ್ಷರ ಬೆಳಕು ನೀಡಿದ ಸಾವಿತ್ರಿಬಾಯಿ ಸ್ಮರಣೆ

05:43 PM Jan 04, 2021 | Team Udayavani |

ರಾಯಚೂರು: ಮನುವಾದ ಪ್ರಬಲವಾಗಿ ಬೆಳೆದು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಉಪನ್ಯಾಸಕಹಾಗೂ ಬಂಡಾಯ ಸಾಹಿತಿ ಜೆ.ಎಲ್‌ ಈರಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಇಲ್ಲಿನ ಹರಿಜನವಾಡಬಡಾವಣೆಯಲ್ಲಿರುವ ಡಾ| ಅಂಬೇಡ್ಕರ್ಸಮುದಾಯ ಭವನದಲ್ಲಿ ಕರ್ನಾಟಕರಾಜ್ಯ ಅಂಗನವಾಡಿ ನೌಕರರ ಸಂಘ, ರಾಜ್ಯದೇವದಾಸಿ ಮಹಿಳೆಯರ ವಿಮೋಚನಾಸಂಘ ಹಾಗೂ ದಲಿತ ಹಕ್ಕುಗಳ ಸಮಿತಿ ಜಿಲ್ಲಾಘಟಕಗಳ ಆಶ್ರಯದಲ್ಲಿ ಶಿಕ್ಷಕಿ ಸಾವಿತ್ರಿಬಾಯಿಫುಲೆ ಅವರ 190ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೊ|ಜಾಗೃತಿ ದೇಶಮಾನೆ ಮಾತನಾಡಿ, ದೇಶದಲ್ಲಿಹೆಣ್ಣು ಮಕ್ಕಳು ತಲೆ ಎತ್ತಿ ನಡೆಯ ಬೇಕಎಂದರೆ ಸಮಾಜದಲ್ಲಿ ಅನಿಷ್ಠ ಪದ್ಧತಿಗಳುನಿರ್ಮೂಲನೆ ಆಗಬೇಕಾದ ಶಿಕ್ಷಣ ಅತ್ಯಂತಮುಖ್ಯ. ಅದನ್ನು ಅರಿತು 1847ರಲ್ಲಿಯೇ ಹೆಣ್ಣು ಮಕ್ಕಳಿಗಾಗಿ ಅಕ್ಷರ ಕಲಿಸಲು ಶಾಲೆಪ್ರಾರಂಭಿಸಿದ ಮಹಾತಾಯಿ ಸಾವಿತ್ರಿಬಾಯಿ ಫುಲೆ ಅವರು ಅನಿಷ್ಟ ಪದ್ಧತಿ ನಿರ್ಮೂಲನೆಗೆಚಳವಳಿ ರೂಪಿಸಿದ್ದಾರೆ ಎಂದರು.

ಫುಲೆ ಅವರ ಕೊಡುಗೆಯಿಂದ ಇಂದು ಹೆಣ್ಣುಮಕ್ಕಳು ಶಿಕ್ಷಣ ಪಡೆದು ಎಲ್ಲಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ.ಅದರೂ ಇಂದಿಗೂ ಸಮಾಜದಲ್ಲಿ ದಲಿತರಮೇಲೆ ದೌರ್ಜನ್ಯ, ಜಾತಿ ಅಸಮಾನತೆ,ಅಸ್ಪೃಶ್ಯತೆಗಳು ನಡೆಯುತ್ತಿವೆ. ಈ ತರಹ ಅನಿಷ್ಟ ಪದ್ಧತಿಗಳ ವಿರುದ್ಧ ದೊಡ್ಡ ರೀತಿಯಚಳವಳಿ ಅವಶ್ಯಕವಾಗಿದೆ ಎಂದರು.

ನಗರಸಭೆ ಉಪಾಧ್ಯಕ್ಷೆ ನರಸಮ್ಮನರಸಿಂಹಲು ಮಾಡಗಿರಿ ಕಾರ್ಯಕ್ರಮಉದ್ಘಾಟಿಸಿದರು. ಇದೇ ಸಂದರ್ಭದಲ್ಲನಗರಭೆಯ ನೂತನ ಉಪಾಧ್ಯಕ್ಷರಾಗಿಆಯ್ಕೆಯಾದ ನರಸಮ್ಮ ನರಸಿಂಹಲುಸನ್ಮಾನಿಸಿದರು. ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಹ ಸಂಚಾಲಕ ಕೆ.ಜಿ. ವೀರೇಶ ಮಾತನಾಡಿದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಚ್‌.ಪದ್ಮಾಅಧ್ಯಕ್ಷತೆ ವಹಿಸಿದ್ದರು. ಮಹಿಳೆಯರು, ವಿದ್ಯಾರ್ಥಿನಿಯರು ಭಾಗವಹಿಸಿದರು.

Advertisement

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ :

ಕವಿತಾಳ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಭಾರತದ ಮೊಟ್ಟ ಮೊದಲಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆಯವರ190ನೇ ಜನ್ಮದಿನ ಆಚರಿಸಲಾಯಿತು.ಶಾಲೆಯ ಮುಖ್ಯೋಪಾಧ್ಯಾಯ ಶೇಕ್‌ಹಮೀದ್‌ ಮಾತನಾಡಿ, ಸಾವಿತ್ರಿಬಾಯಿಫುಲೆಯವರು ದೇಶ ಕಂಡಂತಹ ಮಹಾನ್‌ಮಹಿಳೆ. ಭಾರತೀಯ ಸಮಾಜವು ವರ್ಣ, ಜಾತಿ ವರ್ಗ ವ್ಯವಸ್ಥೆಯನ್ನುತನ್ನ ಒಡಲಲ್ಲಿ ಇಟ್ಟುಕೊಂಡು ಪೋಷಿಸಿದೆ. ಇಂತಹಭಾರತದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಪಟ್ಟ ಸಮುದಾಯಗಳಿಗಾಗಿಯೇ ಮೊಟ್ಟ ಮೊದಲ ಬಾರಿಗೆ ಶಾಲೆಗಳನ್ನು ತೆರದು ಜ್ಞಾನನೀಡಿದವರು ಜ್ಯೋತಿಬಾಯಿ ಫುಲೆ ಮತ್ತುಸಾವಿತ್ರಿಬಾಯಿ ಫುಲೆ ದಂಪತಿ. ಅದರಲ್ಲೂ ಮಹಿಳೆಯರಿಗಾಗಿ ಹಗಲಿರುಳು ಎನ್ನದೇ ಅವರ ಶಿಕ್ಷಣ ಹಾಗೂ ಅಭ್ಯುದಯಕ್ಕಾಗಿತಮ್ಮ ಜೀವನವನ್ನೇ ಅರ್ಪಿಸಿಕೊಂಡು ಅಕ್ಷರದ ಕ್ರಾಂತಿ ಮಾಡಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಎಂದು ಅಜರಾಮರಾದರು ಎಂದು ಹೇಳಿದರು. ಪಟ್ಟಣದ ವಿವಿಧ ಶಾಲೆಗಳಲ್ಲಿ ಶಿಕ್ಷಕಿ ಮಾತೆ ಫುಲೆ ಜನ್ಮದಿನ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next