Advertisement

“ಸೇವ್‌ ಉತ್ತರ ಕರ್ನಾಟಕ’ಅಭಿಯಾನ ಆರಂಭ

10:43 PM Sep 27, 2019 | Team Udayavani |

ಬೆಂಗಳೂರು: ಭೀಕರ ಪ್ರವಾಹದಿಂದ ನಲುಗಿ ಹೋಗಿರುವ ಉತ್ತರ ಕರ್ನಾಟಕಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ತ ಪರಿಹಾರ ನೀಡದೇ ಇರುವುದಕ್ಕೆ ಎಚ್ಚೆತ್ತುಕೊಂಡಿರುವ ಆ ಭಾಗದ ಯುವ ಸಮೂಹ, ಅಂತರ್ಜಾಲದ ಮೂಲಕ “ಉತ್ತರ ಕರ್ನಾಟಕ ಉಳಿಸಿ’ ಅಭಿಯಾನ ಆರಂಭಿಸಿವೆ.

Advertisement

ಸಿಎಂ ಆಫ್ ಕರ್ನಾಟಕ ಹಾಗೂ ಪಿಎಂ ಆಫ್ ಇಂಡಿಯಾ ಟ್ವೀಟ್‌ ಖಾತೆಗೆ ಸರಣಿ ಟ್ವೀಟ್‌ಗಳನ್ನು ಟ್ಯಾಗ್‌ ಮಾಡುವ ಮೂಲ ಅಭಿಯಾನ ಆರಂಭಿಸಿವೆ. ಫೇಸ್‌ಬುಕ್‌ಗಳಲ್ಲೂ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕಾಗಿ ವಾಟ್ಸ್‌ಆಪ್‌ ಚಾಟ್‌ಗ್ರೂಪ್‌ ಕೂಡ ಸಿದ್ಧಪಡಿಸಿದ್ದಾರೆ. ನಾವ್‌ ನಮ್ಮ ಹಕ್ಕನ್ನ ಕೇಳ್ತಿದಿವಿ ಸಾಮೇ, ನಿಮ್ಮ ಭಿಕ್ಷೆನಲ್ಲ….ನಾವು ಉತ್ತರ ಕರ್ನಾಟಕದವ್ರು,

ತಲೆ ಮೇಲೆ ಹೊತ್ಕೊಂಡು ಮೆರವಣಿಗೆ ಮಾಡೊದು ಗೊತ್ತು, ಕಾಲ್ಕೆಳ್ಗೆ ಹಾಕೊಂಡು ಮಣ್ಣು ಮಾಡೊದು ಗೊತ್ತು… ಕಾವೇರಿ ಕೂಗು ಬೇಗ ಕೇಳುತ್ತೆ, ಉತ್ತರ ಕರ್ನಾಟಕದ ಕೂಗು ಕೇಳಿದರೂ ಕಿವುಡರಂತೆ ವರ್ತಿಸ್ತಾರೆ…ಮಾತಿನಂತೆ ಕೃತಿ ಇರಲಿ, ಆಶ್ವಾಸನೆ ಕೊಟ್ಟು, ಆಮೇಲೆ ಅದು ಹಾಗಲ್ಲ, ಹೀಗಲ್ಲ ಅನ್ನೊದಲ್ಲ. ನಮ್ಮಿಂದ ನೀವು-ನಿಮ್ಮಿಂದ ನಾವಲ್ಲ…ಹೀಗೆ ನೂರಾರು ಯುವ ಸಮೂಹ ಸರಣಿ ಟ್ವೀಟ್‌ಗಳನ್ನು ಟ್ಯಾಗ್‌ ಮಾಡುವ ಮೂಲಕ ಅಭಿಯಾನ ಆರಂಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next