Advertisement

ಸೌತಡ್ಕ: ಎಂಡೋ ವಿರೋಧಿ ಸಂತ್ರಸ್ತರ‌ ಸಭೆ

02:42 PM Apr 10, 2017 | |

ನೆಲ್ಯಾಡಿ : ಎಂಡೋ ಸಂತ್ರಸ್ತರ ಬಗೆಗೆ ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಅವರ ಅಧ್ಯಕ್ಷತೆಯಲ್ಲಿ  ಮುಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನಾ ಸಭೆಯು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗಣೇಶ ಕಲಾಮಂದಿರದಲ್ಲಿ ನಡೆಯಿತು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಪುರಂದರ ಗೌಡ ಕಡಿರ, ಎಂಡೋ ಸಂತ್ರಸ್ತರ ಬಾಳಿನಲ್ಲಿ ಸರಕಾರ ಚೆಲ್ಲಾಟ ವಾಡುತ್ತಿದ್ದು  ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ  ಎಂಡೋ ಸಂತ್ರಸ್ತರು ಹೋಗಿ ಪ್ರತಿಭಟಿಸಿಯೂ ಸರಕಾರದ ನಿರ್ಲಕ್ಷ್ಯ  ಧೋರಣೆ ಮುಂದುವರಿಸಿದೆ. ಇದೀಗ ನಿರ್ಣಾಯಕ ಹೋರಾಟ ನಡೆಸಿ  ಈ ಸಮಸ್ಯೆಗೆ ತಾರ್ಕಿಕ ಅಂತ್ಯ ತರಲು ಉದ್ದೇಶಿಸಿ ಈ ಸಮಾಲೋಚನ  ಸಭೆ ಕರೆಯಲಾಗಿದೆ ಎಂದು ನುಡಿದರು.

ಉಡುಪಿ, ದ.ಕ. ಜಿಲ್ಲಾ  ಅಂಗವಿಕಲರ ಸಂಘದ ಅಧ್ಯಕ್ಷ ಡಾ| ಮುರಳೀಧರ ನಾಯಕ್‌ ಮಾತನಾಡಿ, ಕೇರಳ ಸರಕಾರವು ಎಂಡೋ ಸಂತ್ರಸ್ತರಿಗೆ ಸೂಕ್ತರೀತಿಯಲ್ಲಿ  ಪರಿಹಾರದ ವ್ಯವಸ್ಥೆ ಮಾಡಿರುವಾಗ ನಮ್ಮಲ್ಲಿ ಯಾಕೆ ನಿರ್ಲಕ್ಷ್ಯಮಾಡಲಾಗುತ್ತಿದೆ ಎಂದರು.

ನವಚೇತನ ಚಾರಿಟೇಬಲ್‌ ಟ್ರಸ್ಟ್‌  ಬೆಂಗಳೂರು ಇದರ ಸ್ಥಾಪಕಾಧ್ಯಕ್ಷ  ಮಂಜುನಾಥ್‌ ಮಾತನಾಡಿ, ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಕೊಕ್ಕಡದಲ್ಲಿ ನಡೆಯುವ ಎಂಡೋಸಂತ್ರಸ್ತರ ಪ್ರತಿಭ ಟನೆಗೆ ರಾಜ್ಯಾದ್ಯಂತ ತಮ್ಮ ಸಂಘಟನೆಗಳ ಮೂಲಕವೂ ಅದೇ  ದಿನಗಳಲ್ಲಿ   ಪ್ರತಿ ಭಟನೆ ನಡೆಸುವ ಮೂಲಕ ಈ ಬಾರಿ ಎಂಡೋ ಸಂತ್ರಸ್ತರಿಗೆ  ನ್ಯಾಯ ಒದಗಿ ಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ   ವಹಿಸಿ ಮಾತನಾಡಿದ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು  ಅವರು, ತಾನು  ಕೂಡ  ಒಬ್ಬ ಎಂಡೋ ಸಂತ್ರಸ್ತನಾಗಿ  ಇವರಿಗೆ ನ್ಯಾಯ ಒದಗಿ ಸುವ   ನಿಟ್ಟಿನಲ್ಲಿ  ಪ್ರತಿಭಟನೆ ನಡೆಸಿದ್ದಕ್ಕೆ  ಕೆಲವು ಸಚಿವರುಗಳಿಂದ  ಪ್ರಚಾರಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಅನ್ನುವ ಅಪ ವಾದವೂ ಒದಗಿದೆ. ಅತ್ತ ಸಾಯಲೂ ಆಗದೇ ಇತ್ತ ಬದುಕಲೂ ಆಗದೇ ನರಳಾಡುತ್ತಿರುವ ಎಂಡೋ ಸಂತ್ರಸ್ತರು ಒಂದೆಡೆಯಾದರೆ ಮನೆಯವರಿಗೆ ಸಂತ್ರಸ್ತರನ್ನು  ಸಂಭಾಳಿಸುವುದರ ಜತೆಗೆ ಕನಿಷ್ಠ ಪರಿಹಾರಕ್ಕೂ ಸರಕಾರದ ಅಧಿಕಾರಿಗಳ ಮುಂದೆ ಅಲೆದಾಡುವ ಪರಿಸ್ಥಿತಿ ಇದೆ.  

Advertisement

ಕೊಕ್ಕಡದಲ್ಲಿ ಕೆಲವು ದಿನಗಳ ಹಿಂದೆ ಎಂಡೋಸಂತ್ರಸ್ತ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಯಂತಹ  ಘಟನೆ ನಡೆದರೂ ಸರಕಾರದ ಯಾವುದೇ ಪ್ರತಿನಿಧಿಗಳೂ ಕನಿಷ್ಠ ಇಲ್ಲಿಗೆ ಭೇಟಿ ನೀಡಿ ಸಾಂತ್ವನ ಕೂಡ ಹೇಳಿಲ್ಲ.  

ಸರಕಾರಿ ಕೃಪಾಪೋಷಿತ ಎಂಡೋ ಸಿಂಪಡಣೆಯಿಂದಾಗಿ ಉಂಟಾದ ಈ ದುರವಸ್ಥೆಗೂ ಸರಕಾರದ ಬಳಿ ಪರಿಹಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಸರಕಾರದ ಹಾಗೂ ಇಲಾಖಾಧಿಕಾರಿಗಳ ವಿರುದ್ಧ ಈ ಬಾರಿ ಮಾಡು ಇಲ್ಲವೇ ಮಡಿ ಅನ್ನುವ ಹೋರಾಟ ಮಾಡುವ ಉದ್ದೇಶದಿಂದ  ಈ ಸಭೆ ನಡೆದಿದೆ. ಕಳೆದ ಬಾರಿ ಬೆಂಗಳೂರಿಗೆ ಹೋಗಿ ಎಂಡೋ ಸಂತ್ರಸ್ತರು ಪ್ರತಿಭಟಿಸಿದರೂ ನಿರೀಕ್ಷಿತ ಪರಿಹಾರಗಳು ಲಭ್ಯವಾಗದ ಕಾರಣ ಈ ಬಾರಿ ಹೋರಾಟವು ತಾರ್ಕಿಕ ಅಂತ್ಯ ಕಾಣುವುದಕ್ಕೋಸ್ಕರ ಕೊಕ್ಕಡ ದಲ್ಲಿಯೇ ಆಮರಣಾಂತ ಉಪ ವಾಸ ನಡೆಸಲಾಗುವುದು. ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಎಂಡೋಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

750ಕ್ಕಿಂತಲೂ ಹೆಚ್ಚು ಸಂತ್ರಸ್ತರು ಇದರಲ್ಲಿ ಪಾಲ್ಗೊಂಡಿದ್ದರು.ವೇದಿಕೆಯಲ್ಲಿ   ಹಿರಿಯ ಬಿಜೆಪಿ ಮುಖಂಡ ಪೂವಾಜೆ ಕುಶಾಲಪ್ಪಗೌಡ, ನ್ಯಾಯವಾದಿ ಹರೀಶ್‌ ಪೂಂಜ, ಸೇವಾ ಭಾರತಿ ಕನ್ಯಾಡಿ ಇದರ ಸಂಯೋಜಕ ವಿನಾಯಕ ರಾವ್‌, ದ.ಕ. ಜಿಲ್ಲಾ  ಅಂಗವಿಕಲರ ಸಂಘದ ಕಾರ್ಯದರ್ಶಿ ಕೊರಗಪ್ಪಗೌಡ, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ  ನಾರಾಯಣ ಗೌಡ, ರೇವತೀ ತಾಮಣ್‌ಕರ್‌, ಅಲ್ಬರ್ಟ್‌  ಮಿನೇಜಸ್‌   ಮೊದಲಾದವರು  ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next