Advertisement

ಏರ್‌ ಇಂಡಿಯಾ ವಿರುದ್ಧ ಸೌರಭ್‌ ಆಕ್ರೋಶ

10:42 PM May 26, 2019 | Sriram |

ಹೊಸದಿಲ್ಲಿ: ಭಾರತ ಬ್ಯಾಡ್ಮಿಂಟನ್‌ ತಾರೆ ಸೌರಭ್‌ ವರ್ಮ ಏರ್‌ ಇಂಡಿಯಾ ವಿಮಾನ ಯಾನ ಸಂಸ್ಥೆ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಲಗೇಜ್‌ ಬ್ಯಾಗ್‌ಗೆ ಹಾನಿಯಾಗಿದ್ದಕ್ಕೆ ದೂರು ನೀಡಿದರೂ ಕ್ರಮ ತೆಗೆದುಕೊಳ್ಳದೆ ತೀವ್ರ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದ್ದಾರೆ.

Advertisement

ದೂರಿಗೆ ಪ್ರತಿಕ್ರಿಯೆ ಇಲ್ಲ
“ಏರ್‌ ಇಂಡಿಯಾ ವಿಮಾನದಲ್ಲಿ ಹೊಸದಿಲ್ಲಿಯಿಂದ ಡೆನ್ಮಾರ್ಕ್‌ನ ಕೋಪನ್‌ಹೆಗನ್‌ಗೆ ತೆರಳಿದ್ದೆ. ಈ ವೇಳೆ ನನ್ನ ಲಗೇಜ್‌ ಬ್ಯಾಗ್‌ಗೆ ಹಾನಿಯಾಗಿದೆ. ಕೂಡಲೇ ನಾನು ಸಂಸ್ಥೆಗೆ ದೂರು ನೀಡಿದ್ದೇನೆ. ನನಗಾದ ನಷ್ಟವನ್ನು ತುಂಬಿಕೊಡುವಂತೆ ತಿಳಿಸಿದ್ದೇನೆ. ಇ ಮೇಲ್‌ ಮೂಲಕವೂ ಅವರಿಗೆ ಮಾಹಿತಿ ನೀಡಿದ್ದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ಸೌರಭ್‌ ವರ್ಮ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next