Advertisement

ಸತ್ಯಾತ್ಮತೀರ್ಥರ ಚಾತುರ್ಮಾಸ್ಯ ವ್ರತ ಆರಂಭ

10:25 AM Aug 07, 2018 | Team Udayavani |

ಕಲಬುರಗಿ: ನಗರದಲ್ಲಿ 52 ದಿನಗಳ ಕಾಲ ಆರಂಭವಾದ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ 23ನೇ ಚಾತುರ್ಮಾಸ್ಯ ವ್ರತವು ಸೋಮವಾರ ಮಧ್ಯಾಹ್ನ ನಗರದ ಬ್ರಹ್ಮಪುರದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರ-ಉತ್ತರಾದಿ ಮಠದಲ್ಲಿ ಸಂಕಲ್ಪದೊಂದಿಗೆ ಶುಭಾರಂಭಗೊಂಡಿತು.

Advertisement

ಭಕ್ತ ಸಾಗರದೊಂದಿಗೆ ರವಿವಾರ ಸಂಜೆ ಭವ್ಯವಾಗಿ ನಡೆದ ಶೋಭಾಯಾತ್ರೆಯೊಂದಿಗೆ ಸೋಮವಾರ ಚಾತುರ್ಮಾಸ್ಯವು ಶಾಸ್ತ್ರೋಕ್ತ ಸಂಕಲ್ಪದೊಂದಿಗೆ ವಿದ್ಯುಕ್ತವಾಗಿ ಆರಂಭಗೊಂಡಿತು. ಶ್ರೀಮದುತ್ತರಾದಿ ಮಠ ಸಂಸ್ಥಾನದ ರತ್ನಖಚಿತ-ವಜ್ರಮಂಟಪದಲ್ಲಿ ಮೂಲರಾಮದೇವರ ಪೂಜೆ ನೆರವೇರಿಸಿದ ಬಳಿಕ ಶ್ರೀಗಳು ಚಾತುರ್ಮಾಸ್ಯ ವ್ರತದ ಸಂಕಲ್ಪ ಕೈಗೊಂಡರು. ಶ್ರೀಗಳ ಪೂರ್ವಾಶ್ರಮದ ಪಿತೃಗಳಾದ ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ
ಕುಲಪತಿ ಪಂ| ಗುತ್ತಲ ರಂಗಾಚಾರ್ಯರು, ಉತ್ತರಾದಿ ಮಠದ ದಿವಾನರಾದ ಪಂ| ಪ್ರಹ್ಲಾದಾಚಾರ್ಯ ಉಪಾಧ್ಯಾಯ, ಮುಂಬೈ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ. ಮಾಹುಲಿ ವಿದ್ಯಾಸಿಂಹಾಚಾರ್ಯರು, ಪಂ. ಕೃಷ್ಣಾಚಾರ್ಯ ಖೇಡ ಕಡಪಾ, ಪಂ. ವಿದ್ಯಾಧೀಶಾಚಾರ್ಯ ಗುತ್ತಲ, ಪಂ. ವಿಶ್ವಪ್ರಜ್ಞಾಚಾರ್ಯ ಮಾಹುಲಿ, ದಿವಾನರಾದ
ಪಂ. ಶಶಿ ಆಚಾರ್ಯ, ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂ. ವೆಂಕಣ್ಣಾಚಾರ್ಯ ಕೃ. ಪೂಜಾರ, ಪಂ. ರಾಮಾಚಾರ್ಯ ಅವಧಾನಿ, ಮಠಾಧಿಕಾರಿಗಳಾದ ಘಂಟಿ ರಾಮಾಚಾರ್ಯರು, ಪಂ. ಗೋಪಾಲಾಚಾರ್ಯ
ಅಕಮಂಚಿ, ಪಂ. ಗಿರೀಶಾಚಾರ್ಯ ಅವಧಾನಿ, ಪಂ. ಡಾ| ಹನುಮಂತಾಚಾರ್ಯ ಸರಡಗಿ, ಪಂ. ಶ್ರೀನಾಥಾಚಾರ್ಯ ಕೊಪ್ಪರ ಮತ್ತಿತರರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

ಚಾತುರ್ಮಾಸ್ಯ ಸೇವಾ ಸಮಿತಿ ಗೌರವಾಧ್ಯಕ್ಷ ದೇವರಾವ ದೇಶಮುಖ, ಅಧ್ಯಕ್ಷ ಬಿ.ವಿ. ಮಾಡ್ಯಾಳಕರ್‌, ರಾಘವೇಂದ್ರರಾವ ಕೋರಳ್ಳಿ, ಪಾಂಡುರಂಗರಾವ ಕಂಪ್ಲಿ, ಸದಸ್ಯರಾದ ರವಿ ಲಾತೂರಕರ್‌, ಅಭಿಜಿತ್‌ ದೇಶಮುಖ, ಡಾ| ಗಿರೀಶ ಗಲಗಲಿ ಹಾಗೂ ಸಾವಿರಾರು ಭಕ್ತರು ಹಾಜರಿದ್ದರು. ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಿತ್ತಲ್ಲದೇ, ಸಂಜೆ ಎನ್‌.ವಿ. ಸಂಸ್ಥೆಯ ಸತ್ಯಪ್ರಮೋದ ಸಭಾಮಂಟಪದಲ್ಲಿ ವಿದ್ವಾಂಸರಿಂದ ಪ್ರವಚನ, ಶ್ರೀಗಳಿಂದ ಆಶೀರ್ವಚನ ನಡೆದು ಬಂದವು. ಆಗಸ್ಟ್‌ 7ರಂದು ಪಾಕಜ್ಞ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next