Advertisement

ಐದೂವರೆ ಗಂಟೆ ಸತ್ಯಪಾಲ್‌ ಹೇಳಿಕೆ

09:29 PM Apr 28, 2023 | Team Udayavani |

ನವದೆಹಲಿ: ವಿಮೆ ಹಗರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರನ್ನು ಸಿಬಿಐ ಶುಕ್ರವಾರ ವಿಚಾರಣೆ ನಡೆಸಿತು. ನವದೆಹಲಿಯ ಆರ್‌.ಕೆ.ಪುರಂ ಪ್ರದೇಶದ ಮಲಿಕ್‌ ಅವರ ಸೋಮ್‌ ವಿಹಾರ್‌ ನಿವಾಸಕ್ಕೆ ಸಿಬಿಐ ತಂಡ ಶುಕ್ರವಾರ ಬೆಳಗ್ಗೆ 11.45ಕ್ಕೆ ಆಗಮಿಸಿತು. ಸಿಬಿಐ ಅಧಿಕಾರಿಗಳು ಸುಮಾರು ಐದು ಗಂಟೆಗಳ ಕಾಲ ಸತ್ಯಪಾಲ್‌ ಮಲಿಕ್‌ ಅವರ ವಿಚಾರಣೆ ನಡೆಸಿದರು.

Advertisement

“ಈ ಪ್ರಕರಣದಲ್ಲಿ ಮಲಿಕ್‌ ಅವರು ಆರೋಪಿ ಅಥವಾ ಶಂಕಿತರು ಅಲ್ಲ. ಪ್ರಕರಣ ಸಂಬಂಧ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕೂಡ ಸಿಬಿಐ ಮಲಿಕ್‌ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. “ರಾಜ್ಯಪಾಲರಾಗಿದ್ದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಉದ್ಯೋಗಿಗಳಿಗೆ ಗುಂಪು ವೈದ್ಯಕೀಯ ವಿಮೆ ಮತ್ತು 2,200 ಕೋಟಿ ರೂ. ವೆಚ್ಚದ ಕಿರು ಜಲವಿದ್ಯುತ್‌ ಯೋಜನೆಯ ಕಾಮಗಾರಿ ಗುತ್ತಿಗೆಗಾಗಿ 300 ಕೋಟಿ ರೂ. ಲಂಚದ ಆಮಿಷ ಒಡ್ಡಲಾಗಿತ್ತು” ಎಂದು ಇತ್ತೀಚೆಗೆ ಮಲಿಕ್‌ ಹೇಳಿಕೆ ನೀಡಿದ್ದರು. ಇದರ ಆಧಾರದಲ್ಲಿ ಸಿಬಿಐ ಎರಡು ಎಫ್ಐಆರ್‌ಗಳನ್ನು ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next