Advertisement

ಠಾಣೆ ಮುಂದೆ ಸತ್ಯಪಾಲ್‌ ಮಲಿಕ್‌ ಧರಣಿ

10:35 PM Apr 22, 2023 | Team Udayavani |

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯ ಪೊಲೀಸ್‌ ಠಾಣೆ ಎದುರು ಶನಿವಾರ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹಾಗೂ ಅವರ ಬೆಂಬಲಿಗರು ಧರಣಿ ನಡೆಸಿದ್ದಾರೆ. ಪೊಲೀಸರ ಜತೆಗೆ ವಾಗ್ವಾದ ನಡೆಸಿದ್ದಲ್ಲದೇ, ಠಾಣೆ ಎದುರೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ, ಇದು ನಾಟಕೀಯ ಎಂದು ಕೆಲವರು ಟೀಕಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಮಲಿಕ್‌ಗೆ ಸಮನ್ಸ್‌ ನೀಡಿದ್ದ ಮರುದಿನವೇ ಈ ಘಟನೆ ವರದಿಯಾಗಿದೆ.

Advertisement

ದೆಹಲಿಯ ಆರ್‌ಕೆ ಪುರಂ ಪಾರ್ಕ್‌ನಲ್ಲಿ ಮಲಿಕ್‌ ಸಭೆಯೊಂದನ್ನು ಆಯೋಜಿಸಿದ್ದರು. ಅದಕ್ಕೆ ಹರ್ಯಾಣದಿಂದ ಹಲವು ರೈತ ಮುಖಂಡರು ಆಗಮಿಸಿದ್ದರು. ಪಾರ್ಕ್‌ನಲ್ಲಿ ರೈತರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಸಭೆ ಆಯೋಜನೆಗೂ ಮುನ್ನ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಶ್ನಿಸಲಾಯಿತು. ಆದರೆ ಮಲಿಕ್‌ ತಮ್ಮ ಬೆಂಬಲಿಗರ ಜತೆಗೆ ಠಾಣೆಗೆ ಆಗಮಿಸಿ ವಾಗ್ವಾದ ನಡೆಸಿದರು. ಘಟನೆಗೆ ಪ್ರತಿಕ್ರಿಯಿಸಿದ ಪೊಲೀಸರು ತಾವು ಅವರನ್ನು ಬಂಧಿಸಿಲ್ಲ, ಅವರೇ ಸ್ವಯಿಚ್ಛೆಯಿಂದ ಠಾಣೆಗೆ ಬಂದಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next