Advertisement

ತಾಪಂ ಸದಸ್ಯರಿಂದ ನಾಳೆ ಧರಣಿ ಸತ್ಯಾಗ್ರಹ

11:17 AM Jan 12, 2020 | Team Udayavani |

ಜಮಖಂಡಿ: ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಪದಾರ್ಥ ವಿತರಣೆ ಹಾಗೂ ಅಂಗನವಾಡಿಗೆ ಆಹಾರ ಸಾಮಗ್ರಿ ಹಂಚಿಕೆ ಮಾಡುವುದರಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಕ್ರಮ ನಡೆದಿದೆ. ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜ.13ರಂದು ಸೋಮವಾರ ತಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಕನಡೆಸಲಾಗುವುದು ಎಂದು ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಪಂ ಇಒ ಸಂಜೀವ ಹಿಪ್ಪರಗಿ ತಾಪಂ ನಿರ್ಣಯ ಠರಾವು ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸುವುದು, ಗೋಠೆ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಭಾಗ್ಯಲಕ್ಷ್ಮೀ ಬಾಂಡ್‌ ನೀಡಲು ಸದಸ್ಯರ ಬಳಿ ಹಣ ಅಪೇಕ್ಷೆ ಮಾಡುತ್ತಿದ್ದು, ಅಂಗನವಾಡಿಗೆ ಆಹಾರ ಪೂರೈಕೆ ಮಾಡುತ್ತಿರುವ ಎನ್‌ಜಿಒ ಸೀಜ್‌ ಮಾಡಬೇಕು. 2019ರ ಮಾರ್ಚ್‌-ಏಪ್ರಿಲ್‌ ತಿಂಗಳಲ್ಲಿ ತಾಲೂಕಿನಾದಂತ್ಯ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಆಹಾರ ಪೂರೈಕೆ ಮಾಡದೇ ಬಿಲ್‌ ತೆಗೆದಿರುವುದು. ಕಳಪೆ ಆಹಾರ ಸಾಮಗ್ರಿಗಳನ್ನು ನೀಡುತ್ತಿರುವ ಹೀಗೆ ಅನೇಕ ವಿಷಯಗಳ ಸಮಗ್ರ ತನಿಖೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ  ಹಮ್ಮಿಕೊಳ್ಳಲಾಗುತ್ತಿದೆ.

ಸತ್ಯಾಗ್ರಹದಲ್ಲಿ ತಾಪಂ ಎಲ್ಲ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ತಾಪಂ ಸದಸ್ಯರಾದ ಶ್ರೀಮಂತ ಚೌರಿ, ಧರೆಪ್ಪ ಗುಗ್ಗರಿ, ಬಸವರಾಜ ಮಾಳಿ, ಭೀಮಪ್ಪ ಹಾದಿಮನಿ, ಗೋವಿಂದ ಗಸ್ತಿ, ನಾಗವ್ವ ಕುರಣಿ, ಚಂದಪ್ಪ ನರಸಗೊಂಡ, ಮಂಜುನಾಥ ಆಲಬಾಳ, ಬಸವರಾಜ ಕಡಪಟ್ಟಿ, ಸದಾಶಿವ ಮಾಂಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next