Advertisement

ತಿಂಗಳ ಪ್ರಥಮ ಶನಿವಾರದ ವಿಶೇಷ ಪೂಜೆ, ಸಮ್ಮಾನ

01:16 PM May 05, 2021 | Team Udayavani |

ಮುಂಬಯಿ: ಮೀರಾರೋಡ್‌ ಶ್ರೀ ಶನೀಶ್ವರ ಮಂದಿರದಲ್ಲಿ ತಿಂಗಳ ಪ್ರಥಮ ಶನಿವಾರದ ವಿಶೇಷ ಪೂಜೆಯು ಶ್ರೀ ಶನೀಶ್ವರ ಗ್ರಂಥ ಪಾರಾಯಣದ ಮೂಲಕ ನಡೆಯಿತು.

Advertisement

ಇದೇ ಸಂದರ್ಭದಲ್ಲಿ ಶ್ರೀ ಶನೀಶ್ವರ ಭಜನ ಸಮಿತಿಯವರಿಂದ ಭಜನೆ, ರಾತ್ರಿ 7ರಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಈ ವಿಶೇಷ ಪೂಜೆಯಲ್ಲಿ  ಮಂದಿರದ ಜತೆ ಕಾರ್ಯದರ್ಶಿ ಉಷಾ ದಿನೇಶ್‌ ಶೆಟ್ಟಿಗಾರ್‌ ಅವರನ್ನು ಹಾಗೂ ಸಮಿತಿಯ ಉಪಾಧ್ಯಕ್ಷ ಗುಣಕಾಂತ್‌ ಭಾರತಿ ಶೆಟ್ಟಿ ಕರ್ಜೆ ಅವರನ್ನು ಮಂದಿರದ ಗೌರವ ಅಧ್ಯಕ್ಷ ವಿನೋದ್‌ ವಾಘಾಸಿಯ ಅವರು ಶಾಲು ಹೊದೆಸಿ, ಪೂಜೆಯ ಪ್ರಸಾದವನ್ನು ನೀಡಿ ಗೌರವಿಸಿದರು.

ಈ ಸಮಯದಲ್ಲಿ ಅಧ್ಯಕ್ಷೆ ವಿದ್ಯಾ ಅಶೋಕ್‌ ಕರ್ಕೇರ, ಕಾರ್ಯದರ್ಶಿ ಸದಾನಂದ್‌ ಪೂಜಾರಿ ಕಾರ್ಕಳ, ಜತೆ ಕೋಶಾಧಿಕಾರಿ ಜಯಕರ್‌ ಶೆಟ್ಟಿ ಮುದ್ರಾಡಿ, ಪೂಜಾ ಸಮಿತಿಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಮಹಿಳಾ ಸಮಿತಿಯ ಸುಜಾತಾ ಶೆಟ್ಟಿ, ವಿನಯಾ ಶೆಟ್ಟಿ, ಮಧುಕರ್‌, ಭಾರತಿ ಹಾಗೂ ಯುವ ಸಮಿತಿಯ ಜಯೇಶ್‌ ಸುವರ್ಣ, ಕಾವ್ಯಾ ಶೆಟ್ಟಿಗಾರ್‌, ಹಿಮಾಂಶ್‌ ಅಮೀನ್‌ ಅರ್ಚಕರಾದ ನಿರಾವ್‌ ಭಟ್‌ ಮತ್ತು ಸುಶಿಲ್‌ ಮಿಶ್ರ ಅವರು ಪಾಲ್ಗೊಂಡು ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಿದರು. ಈ ಸಂದರ್ಭ ಕೊರೊನಾ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕೊರೊನಾ ಮಾರ್ಗಸೂಚಿಯನ್ನು ಅನುಸರಿಸಿ ಕಾರ್ಯಕ್ರಮ ನಡೆಯಿತು. ಸದಾನಂದ್‌ ಪೂಜಾರಿ ಕಾರ್ಕಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next