Advertisement
ನೀವು ಶಿವಮೊಗ್ಗದ ತೀರ್ಥಹಳ್ಳಿಗೆ ಬಂದರೆ ಅಲ್ಲಿ ಸಿಗುವ ಪರಿಚಯದ ಜನ ನಿಮ್ಮನ್ನು ಹೀಗೆ ಕರೆದಾರು. ಹೌದು, ಪಟ್ಟಣದ ಹೃದಯ ಭಾಗದಲ್ಲಿರುವ ಸನ್ಮಾನ್ ಮೆಸ್, ಮಧ್ಯಾಹ್ನದ ಊಟಕ್ಕೆ ತನ್ನದೇ ಆದ ಹೆಸರು ಪಡೆದುಕೊಂಡಿದೆ. ಕಳೆದ 20 ವರ್ಷಗಳಿಂದ ಮಲೆನಾಡಿನಲ್ಲಿ ಮನೆಮಾತಾದ ಭೋಜನದ ಮನೆ ಇದು.
Related Articles
Advertisement
ಗೋಪಾಲ ಭಟ್ಟರ ನಾಗರತ್ನ ದಂಪತಿ ತಾವೇ ಅಡುಗೆ ಮನೆಯಲ್ಲಿ ಊಟ ತಯಾರಿಸಿ, ಎಲ್ಲಾ ಗ್ರಾಹಕರಿಗೂ ಊಟ ಬಡಿಸುತ್ತಾರೆ. ಗೋಪಾಲ ಭಟ್ಟರು ಹೇಳುವಂತೆ, ‘ತಮ್ಮ ಬದುಕನ್ನು ಕಳೆದ 20 ವರ್ಷಗಳಿಂದ ಈ ಭೋಜನಾಲಯದ ಆದಾಯದಲ್ಲಿಯೇ ಕಟ್ಟಿಕೊಂಡಿದ್ದೇವೆ. ಗುಣಮಟ್ಟದ ಊಟ ಹಾಗೂ ಗ್ರಾಹಕರಿಗೆ ತೃಪ್ತಿ ಕೊಟ್ಟ ನಮಗಿದೆ. ಹೆಮ್ಮೆ ಗ್ರಾಹಕರು ನೀಡಿದ ಬೆಂಬಲವೇ ನಮ್ಮ ನೆಮ್ಮದಿಯ ಜೀವನಕ್ಕೆ ಕಾರಣ’ ಎನ್ನುತ್ತಾರೆ.
‘ಕಳೆದ 17 ವರ್ಷಗಳಿಂದ ಈ ಮೆಸ್ನಲ್ಲಿ ಊಟ ಮಾಡುತ್ತಿದ್ದೇನೆ. ಶುದ್ಧತೆ ಮತ್ತು ಗುಣಮಟ್ಟದ ವಿಚಾರದಲ್ಲಿ ನಮ್ಮೂರಿನ ಸನ್ಮಾನ್ ಮೆಸ್ ಮನೆಮಾತಾಗಿರುವುದು ಹೆಮ್ಮೆಯ ವಿಚಾರ’ ಎಂದು ಈ ಹೋಟೆಲ್ನ ಖಾಯಂ ಗ್ರಾಹಕ ಆಡಿಟರ್ ಚಕ್ಕೋಡಬೈಲು ನಾಗರಾಜ್ ಹೇಳುತ್ತಾರೆ. ಒಟ್ಟಾರೆ, ಮಲೆನಾಡಿನ ಭೋಜನ ಪ್ರಿಯರ ಪಾಲಿಗೆ ಸನ್ಮಾನ್ ಮೆಸ್ ಸಂತೃಪ್ತಿಯ ಊಟದೊಂದಿಗೆ ನೆಮ್ಮದಿ ತಂದಿದೆ. ಸನ್ಮಾನ್ ಮೆನು ಹೀಗಿದೆ- * ಪ್ಲೇಟ್ ಅನ್ನ, ಸಾಂಬಾರು, ತಿಳಿ ಸಾರು, ಒಂದು ಪಲ್ಯ, ಚಟ್ನಿ, ಸಂಡಿಗೆ ಮೆಣಸು, ಮೊಸರು, ಮಜ್ಜಿಗೆ, ಉಪ್ಪಿನಕಾು (ಹೆಚ್ಚುವರಿ ರೈಸ್ ಸೌಲಭ್ಯ).ಊಟದ ಬೆಲೆ 50ರೂ. – ರಾಮಚಂದ್ರ ಕೊಪ್ಪಲು