Advertisement

ಕಾಡಲ್ಲಿ ಸತೀಶ್ ಸುತ್ತಾಟ

04:59 PM Dec 12, 2018 | |

ಸ್ಯಾಂಡಲ್​ವುಡ್​ ನಟರು ಇತ್ತೀಚೆಗೆ ಪರಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. “ಅಯೋಗ್ಯ’ ಸಿನಿಮಾದ ಸಕ್ಸಸ್​ ನಂತರ, ನೀನಾಸಂ ಸತೀಶ್ ಕಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದು, “ಪಗೈವುನುಕು ಅರುಳ್​​​ವೈ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸದ್ಯ ಇದೇ ಖುಷಿಯಲ್ಲಿರೋ ಸತೀಶ್​​ ನೀನಾಸಂ ಟ್ರಕ್ಕಿಂಗ್​​ ಅಂತ ಕಾಡು ಸುತ್ತುತ್ತಿದ್ದಾರೆ.

Advertisement

ಹೌದು, ಸತೀಶ್​​​​ ಸಿನಿಮಾ ಚಿತ್ರೀಕರಣಕ್ಕಾಗಿ ಕಾಡಿಗೆ ಹೋದರೋ ಅಥವಾ ಕಾಲಹರಣಕ್ಕಾಗಿ ಕಾಡಿಗೆ ಕಾಲಿಟ್ಟರೋ ಗೊತ್ತಿಲ್ಲ.! ಆದರೆ ಕಾಡಿನ ಹಚ್ಚ ಹಸಿರಿನ ತಂಪಾದ ವಾತಾವರಣದಲ್ಲಿ ನಿಂತು, “ಕಾಡಿನ ರಾಜ ಅಂದಾಗಲೆಲ್ಲ ಟೈಗರ್​​ ನೆನಪಾಗೋದಿಲ್ಲ, ಬದಲಿಗೆ ಟೈಗರ್​​ ಪ್ರಭಾಕರ್​​ ನೆನಪಾಗುತ್ತಾರೆ’ ಎಂದು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ ಈ ಟ್ವೀಟ್‍ಗೆ ಸತೀಶ್​​ ಅಭಿಮಾನಿಗಳು ತರಹೇವಾರಿ ಕಮೆಂಟ್‍ಗಳನ್ನು ಮಾಡಿದ್ದಾರೆ. ಇನ್ನು ನೀನಾಸಂ ಸತೀಶ್‌ ಕೆರಿಯರ್‌ಗೆ ತುಂಬಾ ದಿನಗಳ ನಂತರ ದೊಡ್ಡದೊಂದು ತಿರುವು ಕೊಟ್ಟ ಸಿನಿಮಾ “ಅಯೋಗ್ಯ’. ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸದ್ದು ಮಾಡಿದ್ದಲ್ಲದೇ, ಶತದಿನೋತ್ಸವವನ್ನೂ ಆಚರಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next