Advertisement

ಕುಕ್ಕೆಯಲ್ಲಿ ಗೋದ್ರಾ ಸಿನಿಮಾ ಚಿತ್ರೀಕರಣ; ನಟ ಸತೀಶ್ ಗೆ ಗಾಯ

04:34 PM Sep 05, 2017 | Sharanya Alva |

ಮಂಗಳೂರು:  ಕೆಎಸ್ ನಂದೀಶ್ ನಿರ್ಮಾಣದ ಗೋದ್ರಾ ಸಿನಿಮಾ ಚಿತ್ರೀಕರಣದ ವೇಳೆ ಸ್ಫೋಟಕ ಸಿಡಿಸುವಾಗ ನಟ ನೀನಾಸಂ ಸತೀಶ್ ಗೆ ಗಾಯವಾಗಿರುವ ಘಟನೆ ಸೋಮವಾರ ಕುಕ್ಕೆಸುಬ್ರಹ್ಮಣ್ಯ ಅರಣ್ಯಪ್ರದೇಶದಲ್ಲಿ ನಡೆದಿದೆ.

Advertisement

ಗೋದ್ರಾ ಸಿನಿಮಾ ಚಿತ್ರೀಕರಣಕ್ಕಾಗಿ ಬಾಂಬ್ ಸಿಡಿಸುವ ವೇಳೆ ಈ ಅವಘಡ ಸಂಭವಿಸಿರುವುದಾಗಿ ನಟ ನೀನಾಸಂ ಸತೀಶ್ ಖಾಸಗಿ ಟಿವಿ ಚಾನೆಲ್ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ದಿಢೀರ್ ಸ್ಫೋಟಕ ಸಿಡಿದಿದ್ದರಿಂದ ತನಗೆ ಮೂರ್ನಾಲ್ಕು ನಿಮಿಷ ಏನಾಯ್ತು ಎಂದು ತಿಳಿಯಲೇ ಇಲ್ಲ. ಅಂತೂ ದೇವರ ದಯೆಯಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿರುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next