Advertisement

ಸತೀಶ ಜಾರಕಿಹೊಳಿ ತಲೆ ಸರಿಯಿಲ್ಲ: ರಮೇಶ

11:29 PM Sep 06, 2019 | Team Udayavani |

ಬೆಳಗಾವಿ: “ಮಾಜಿ ಸಚಿವ ಸತೀಶ ಜಾರಕಿಹೊಳಿ ತಲೆ ಸರಿಯಲ್ಲ. ಅವರನ್ನು ಧಾರವಾಡದ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಿದೆ’ ಎಂದು ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಎಂದಿಗೂ ಪ್ರಚಾರ ಪ್ರಿಯನಲ್ಲ.

Advertisement

ನನ್ನ ಹೆಸರನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದರು “ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಮೊದಲಿಂದಲೂ ನನ್ನ ಉತ್ತಮ ಗೆಳೆಯ. ಅವನ ಕಷ್ಟ ಕಾಲದಲ್ಲಿ ನಾನು ಅವರೊಂದಿಗೆ ಇರುತ್ತೇನೆ. ದೆಹಲಿಗೆ ಹೋದ ಬಳಿಕ ಅವರನ್ನು ಭೇಟಿಯಾಗುತ್ತೇನೆ. ರಾಜಕೀಯ ಬೇರೆ. ವೈಯಕ್ತಿಕ ಸಂಬಂಧ ಬೇರೆ. ಇದೇ ಕಾರಣಕ್ಕೆ ನಾನು ಅವರನ್ನು ಭೇಟಿ ಮಾಡುತ್ತೇನೆ.

ಕಷ್ಟ ಕಾಲದಲ್ಲಿ ಅವರ ಜೊತೆ ಇರುತ್ತೇನೆ’ ಎಂದರು. ಕ್ಷೇತ್ರದ ಜನರನ್ನು ಮರೆತು ಯಾತ್ರೆ ಮಾಡುತ್ತಿದ್ದಾರೆ ಎಂಬ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “14ನೇ ಬಾರಿ ನಾನು ಉತ್ತರ ಭಾರತಕ್ಕೆ ಹೋಗಿದ್ದೇನೆ. ಅದರಲ್ಲಿ ಹೊಸದೇನಿಲ್ಲ. ದೇವರ ದರ್ಶನಕ್ಕೆ ಹೋದರೆ ಅದು ಮಜಾ ಮಾಡಲು ಹೋದಂತೆನಾ?’ ಎಂದು ಪ್ರಶ್ನಿಸಿದರು. “ಮಾಧ್ಯಮಗಳ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ’ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next