Advertisement

ಡಿಸಿಎಂ ಸವದಿ ಪರ ಸತೀಶ ಬ್ಯಾಟಿಂಗ್‌

11:01 PM Sep 28, 2019 | Lakshmi GovindaRaju |

ಬೆಳಗಾವಿ: ಅನರ್ಹ ಶಾಸಕ ಮಹೇಶ ಕುಮಟಳ್ಳಿ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಅವರ ಪರ ಶಾಸಕ ಸತೀಶ ಜಾರಕಿಹೊಳಿ ಬ್ಯಾಟ್‌ ಬೀಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಟಳ್ಳಿ ಬಗ್ಗೆ ಸವದಿ ಸರಿಯಾಗಿ ಹೇಳಿದ್ದಾರೆ. ಒಂದು ಪಕ್ಷದಿಂದ ಆಯ್ಕೆಯಾದರೂ ಹೊರಹೋಗಿದ್ದು ತಪ್ಪು.

Advertisement

ಸವದಿ ತಪ್ಪೇನೂ ಹೇಳಿಲ್ಲ. ಈಗ ಕೇವಲ ಮಹೇಶ ಬೈಯಿಸಿಕೊಂಡಿದ್ದಾನೆ. ನಾಳೆ ರಮೇಶಗೂ ಈ ಪರಿಸ್ಥಿತಿ ಬಂದರೆ ಆಶ್ಚರ್ಯ ಪಡಬೇಕಿಲ್ಲ ಎಂದರು. ರಮೇಶ ಪಕ್ಷದಿಂದ ಹೊರಗಡೆ ಇದ್ದಿದ್ದರಿಂದ ಇಷ್ಟು ಮಾತನಾಡುತ್ತಿದ್ದಾರೆ. ಬಿಜೆಪಿ ಸೇರಿದ ಬಳಿಕ ಇಷ್ಟು ಮಾತನಾಡಲು ಆಗುವುದಿಲ್ಲ. ಬಿಜೆಪಿಯಲ್ಲಿ ಆರೆಸ್ಸೆಸ್‌ ಹಾಗೂ ಬಿಜೆಪಿ ಎಂಬ ಎರಡು ಹೈಕಮಾಂಡ್‌ಗಳಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next