Advertisement

ಸಾಸ್ತಾನ ಟೋಲ್‌ ಕೇಂದ್ರ:  ಕಾರು ಚಾಲಕನ ಮೇಲೆ ಹಲ್ಲೆ

02:50 PM May 22, 2017 | Team Udayavani |

ಕೋಟ: ಸಾಸ್ತಾನ ಟೋಲ್‌ ಕೇಂದ್ರದಲ್ಲಿ  ಕಾರು ಚಾಲಕನ ಮೇಲೆ ಹಲ್ಲೆ ಗೈದ  ಘಟನೆ ರವಿವಾರ ಸಂಜೆ ಸಂಭವಿಸಿದೆ. ಬ್ರಹ್ಮಾವರ ಬೈಕಾಡಿ ನಿವಾಸಿ ಪ್ರಭಾಕರ್‌ ಶೆಟ್ಟಿ ಹಲ್ಲೆಗೊಳಗಾದ ವ್ಯಕ್ತಿ.

Advertisement

ಪ್ರಭಾಕರ  ಶೆಟ್ಟಿಯವರು ತನ್ನ ಮಗನೊಂದಿಗೆ ಬ್ರಹ್ಮಾವರದಿಂದ ಬೈಂದೂರಿಗೆ ತೆರಳುತ್ತಿದ್ದಾಗ   ಸಾಸ್ತಾನ ಟೋಲ್‌ ಕೇಂದ್ರದಲ್ಲಿ ಸಿಬಂದಿಯ ಅಚಾತುರ್ಯದಿಂದ ಗೇಟ್‌ನ ರಾಡ್‌ ಇವರ ಕಾರಿನ ಮೇಲೆ ಬಿದ್ದು ಟೋಲ್‌ ಸಿಬಂದಿಯೊಂದಿಗೆ ಮಾತಿನ ಚಕಮಕಿ ನಡೆಯಿತು. ಈ  ಸಂದರ್ಭ ಟೋಲ್‌ ಸಿಬಂದಿ ಹಾಗೂ   ಹಿಂಬದಿಯಲ್ಲಿದ್ದ ವಾಹನದ ಸವಾರರು ಅವರ ಮೇಲೆ ಅವಾಚ್ಯವಾಗಿ ನಿಂದಿಸಿ ಹಲ್ಲೆ  ನಡೆಸಿದ್ದಾರೆ. ಘಟನೆಯಿಂದ ಕೈಕಾಲು ಹಾಗೂ ಕಣ್ಣಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಭಾಕರ ಶೆಟ್ಟಿಯವರು ಕೋಟ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ  ತಿಳಿಸಿದ್ದಾರೆ.

ಟೋಲ್‌ ಸಿಬಂದಿ ವಿರುದ್ಧ ಆಕ್ರೋಶ  
ವಾರದ ಹಿಂದೆ  ಸುರತ್ಕಲ್‌ ಮೂಲದ ಮಹಿಳೆಗೆ ಟೋಲ್‌ನಲ್ಲಿ ಮಾನ ಹಾನಿಯಾಗುವಂತೆ ವರ್ತಿದ್ದು, ಇದೀಗ ಮತ್ತೆ  ವಾಹನ ಸವಾರನ   ವಿರುದ್ಧ  ಹಲ್ಲೆ  ನಡೆಸಲಾಗಿದೆ ಎಂದು ಟೋಲ್‌ಗೇಟ್‌ ಬಳಿ  ಆಗಮಿಸಿದ  ಸ್ಥಳೀಯರು  ಆಕ್ರೋಶ  ವ್ಯಕ್ತಪಡಿಸಿದರು .

ಸರಿಯಾದ ಸಿ.ಸಿ. ಟಿವಿ   ವ್ಯವಸ್ಥೆ ಇಲ್ಲದಿರುವುದರಿಂದ  ಘಟನೆ  ಸರಿಯಾಗಿ ಚಿತ್ರೀಕರಣಗೊಂಡಿಲ್ಲ   ಎಂದು ಸ್ಥಳೀಯರು  ಈ ಸಂದರ್ಭದಲ್ಲಿ  ಅಸಮಾಧಾನ ವ್ಯಕ್ತಪಡಿಸಿದರು.

ಸಿಬಂದಿ ಹಲ್ಲೆ ನಡೆಸಿಲ್ಲ 
ಪ್ರಭಾಕರ್‌ ಶೆಟ್ಟಿ ಮೇಲೆ ಟೋಲ್‌ ಸಿಬಂದಿ ಹಲ್ಲೆ ನಡೆಸಿಲ್ಲ, ನಾವು ಶಾಂತ ರೀತಿಯಲ್ಲಿ ಅವರನ್ನು  ಸಮಾಧಾನಿ ಸುವ ಯತ್ನ ನಡೆಸಿದ್ದೇವೆ.  ಆದರೆ ಅವರು ಗಲಾಟೆ  ಮಾಡುತ್ತಿದ್ದ ಕಾರಣ ಹಿಂಬದಿ ವಾಹನ ಗಳು   ಬ್ಲಾಕ್‌  ಆಗಿದೆ.   ಈ  ಸಂದರ್ಭ ಆ   ವಾಹನದ ಸವಾರರು ಇವರ ಮೇಲೆ  ಹಲ್ಲೆ   ನಡೆಸಿದ್ದಾರೆ.  ಅದರಲ್ಲಿ ಟೋಲ್‌   ಸಿಬಂದಿ  ತಪ್ಪಿಲ್ಲ ಎಂದು ಟೋಲ್‌ನ ಮೇಲ್ವಿಚಾರಕರು ತಿಳಿಸಿದ್ದಾರೆ ಹಾಗೂ   ಸಿ.ಸಿ.  ಟಿವಿಯನ್ನು ಪರಿಶೀಲಿಸಿದಾಗ  ಮೇಲ್ನೋಟಕ್ಕೆ  ಸಿಬಂದಿಯಿಂದ ಈ  ಹಲ್ಲೆ   ನಡೆದಿಲ್ಲ ಎಂದು   ತಿಳಿದು  ಬಂದಿದೆ  ಎಂದು ಪೊಲೀಸರು  ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next