Advertisement

ಕಾಲಾವಕಾಶ ಕೊಡಲ್ಲ,ಬೆಂಗಳೂರು ಕೋರ್ಟ್ ಗೆ ಶರಣಾಗಿ; ಶಶಿಕಲಾಗೆ ಸುಪ್ರೀಂ

10:52 AM Feb 15, 2017 | Sharanya Alva |

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ನಟರಾಜನ್ ಶರಣಾಗಲು ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದ್ದು, ಕೂಡಲೇ ಬೆಂಗಳೂರು ವಿಶೇಷ ಕೋರ್ಟ್ ಗೆ ಶರಣಾಗುವಂತೆ ಸೂಚನೆ ನೀಡಿದೆ.

Advertisement

ಶಶಿಕಲಾ ಪರ ವಕೀಲರಾದ ಕೆಟಿಎಸ್ ತುಳಸಿ ಅವರು, ಬೆಂಗಳೂರು ವಿಶೇಷ ಕೋರ್ಟ್ ಗೆ ಶರಣಾಗಲು 4 ವಾರಗಳ ಕಾಲಾವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಶರಣಾಗತಿಗೆ ಮತ್ತೆ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಪ್ರಕರಣದ ಬಗ್ಗೆ ಈಗಾಗಲೇ ತೀರ್ಪು ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದ್ದು, ಇದರಿಂದ ಶಶಿಕಲಾಗೆ ಮತ್ತೊಂದು ಹಿನ್ನಡೆಯಾದಂತಾಗಿದೆ.

ಸುಪ್ರೀಂ ಆದೇಶದ ಬೆನ್ನಲ್ಲೇ ಫೋಯಸ್ ಗಾರ್ಡ್ ನಿಂದ ಬೆಂಗಳೂರಿನತ್ತ!
ಸುಪ್ರೀಂಕೋರ್ಟ್ ಕಾಲಾವಕಾಶ ನೀಡಬಹುದೆಂಬ ನಿರೀಕ್ಷೆಯಲ್ಲಿ ಶಶಿಕಲಾಗೆ ಇಂದೂ ಕೂಡಾ ಭಾರೀ ಶಾಕ್ ಕೊಟ್ಟಂತಾಗಿದೆ. ಕಾಲಾವಕಾಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿ, ಕೋರ್ಟ್ ಗೆ ಶರಣಾಗಲು ಸೂಚಿಸಿದ ಸುದ್ದಿ ಬಿತ್ತರವಾಗುತ್ತಿರುವಂತೆಯೇ ಪೋಯಸ್ ಗಾರ್ಡ್ ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next