Advertisement

ಯುವರಾಜ್‌ ಕುಮಾರ್‌ ʼಯುವʼನಿಗೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆ

05:07 PM Mar 06, 2023 | Team Udayavani |

ಬೆಂಗಳೂರು:  ಸಂತೋಷ್‌ ಆನಂದರಾಮ್‌ ನಿರ್ದೇಶನದ ʼಯುವʼ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿದೆ. ರಾಜ್‌ ಕುಟುಂಬದ ಕಿರಿಯ ಕುಡಿ ಯುವರಾಜ್‌ ಕುಮಾರ್‌ ಅವರ ಚೊಚ್ಚಲ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

Advertisement

ತಮ್ಮ ಮೊದಲ ಸಿನಿಮಾಕ್ಕಾಗಿ ಯುವರಾಜ್‌ ಕುಮಾರ್‌ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಸಿನಿಮಾಕ್ಕೆ ʼಯುವʼ ಎನ್ನುವ ಟೈಟಲ್‌ ಇಡಲಾಗಿದೆ. ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌, ಜಗ್ಗೇಶ್‌, ಡಾಲಿ ಧನಂಜಯ ರಿಷಬ್‌ ಶೆಟ್ಟಿ, ನಿರ್ದೇಶಕ ಪ್ರಶಾಂತ್‌ ನೀಲ್‌ ಸೇರಿದಂತೆ ಹಲವು ಗಣ್ಯರು ʼಯುವʼ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದರು.

ಹೊಂಬಾಳೆ ಫಿಲ್ಮ್ಸ್‌ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ಈ ಹಿಂದೆ ʼಕಾಂತಾರʼದಲ್ಲಿ ʼಲೀಲಾʼಳಾಗಿ ಪ್ರೇಕ್ಷಕರ ಮನ ಕದ್ದ ಸಪ್ತಮಿ ಗೌಡ ಅವರು ʼಯುವʼ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಯುವ”ರಾಜನ ಅರಸಿಗೆ ಆದರದ ಸ್ವಾಗತ’ ಎಂದು ಬರೆದು ಫೋಸ್ಟ್‌ ಹಂಚಿಕೊಂಡಿದೆ.

ಯುವ ಸಿನಿಮಾ ಇದೇ ವರ್ಷದ ಡಿಸೆಂಬರ್‌ 22 ರಂದು ರಿಲೀಸ್‌ ಆಗಲಿದೆ.

ʼಕಾಂತಾರʼದಲ್ಲಿನ ನಟನೆಯಿಂದ ಅನೇಕ ಆಫರ್‌ ಗಳು ಸಪ್ತಮಿ ಅವರನ್ನು ಹುಡುಕಿಕೊಂಡು ಬರುತ್ತಿದೆ. ಈಗಾಗಲೇ ಅವರು ಅಭಿಷೇಕ್‌ ಅಂಬರೀಶ್‌ ಅವರ ʼಕಾಳಿʼ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next