Advertisement

ಸಪ್ತಸಾಗರದಾಚೆ ಎಲ್ಲೋ ರಕ್ಷಿತ್‌

09:50 AM Mar 20, 2020 | Lakshmi GovindaRaj |

ಪುಷ್ಕರ್‌ ಫಿಲಂಸ್‌ ನಿರ್ಮಾಣದಲ್ಲಿ ರಕ್ಷಿತ್‌ ಶೆಟ್ಟಿ ನಾಯಕರಾಗಿ “ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಂದಿದ್ದು ನಿಮಗೆ ಗೊತ್ತೇ ಇದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರಕ್ಕೆ ಬಿಡುಗಡೆಯ ನಂತರ ಒಂದಷ್ಟು ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ಕನ್ನಡದಲ್ಲಿ ಕಲೆಕ್ಷನ್‌ ವಿಷಯದಲ್ಲಿ ಚಿತ್ರ ಹಿಂದೆ ಬೀಳಲಿಲ್ಲ. ಆದರೆ, ಬೇರೆ ಭಾಷೆಗಳಲ್ಲಿ ಅಂದುಕೊಂಡ ಮಟ್ಟಿಗೆ ಹೋಗಲಿಲ್ಲ ಎಂಬ ಬೇಸರ ಚಿತ್ರತಂಡಕ್ಕಿದೆ.

Advertisement

ಹಾಗಂತ ಬೇಸರ ಮಾಡಿಕೊಂಡು ಚಿತ್ರತಂಡ ಕೂತಿಲ್ಲ. ಮತ್ತೂಂದು ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಹೌದು, ಪುಷ್ಕರ್‌ ನಿರ್ಮಾಣದಲ್ಲಿ ರಕ್ಷಿತ್‌ ಶೆಟ್ಟಿ ಹೊಸ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಹೇಮಂತ್‌ ನಿರ್ದೇಶಿಸಲಿದ್ದಾರೆ. “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಈ ತಂಡ ಒಟ್ಟಿಗೆ ಕೆಲಸ ಮಾಡಿತ್ತು. ಈಗ ಮತ್ತೂಮ್ಮೆ ಮೂವರು ಒಟ್ಟಾಗಿ ಹೊಸ ಸಿನಿಮಾ ಮಾಡಲು ಹೊರಟಿದ್ದಾರೆ.

ಆ ಸಿನಿಮಾಕ್ಕೆ ಅವರಿಟ್ಟ ಹೆಸರು “ಸಪ್ತಸಾಗರದಾಚೆ ಎಲ್ಲೋ’. ಹೀಗೊಂದು ವಿಭಿನ್ನ ಟೈಟಲ್‌ನಡಿ ಸಿನಿಮಾ ಆರಂಭವಾಗುತ್ತಿದೆ. ಈಗಾಗಲೇ ಕಥೆ ಸೇರಿದಂತೆ ಬಹುತೇಕ ಅಂಶಗಳು ಫೈನಲ್‌ ಆಗಿವೆ. ಇದೊಂದು ಲವ್‌ ಕಂ ಆ್ಯಕ್ಷನ್‌ ಸಿನಿಮಾವಾಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬುದು ಚಿತ್ರತಂಡದ ಮಾತು. ಸದ್ಯ ಚಿತ್ರಕ್ಕೆ ಪುಷ್ಕರ್‌, ರಕ್ಷಿತ್‌ ಹಾಗೂ ಹೇಮಂತ್‌ ಅವರು ಜೊತೆಯಾಗಿದ್ದು,

ಇತರ ಅಂಶಗಳನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಿಟ್ಟುಕೊಡಲಿದೆ. ಸದ್ಯ ರಕ್ಷಿತ್‌ ಶೆಟ್ಟಿ “777 ಚಾರ್ಲಿ’ ಚಿತ್ರೀಕರಣದಲ್ಲಿದ್ದು, ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ. ಅಂದಹಾಗೆ, ಪುಷ್ಕರ್‌-ರಕ್ಷಿತ್‌ ಕಾಂಬಿನೇಶನ್‌ನ ಹೊಸ ಸಿನಿಮಾ ಮೇನಲ್ಲಿ ಆರಂಭವಾಗಲಿದ್ದು, ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ಹೆಚ್ಚು ತಡಮಾಡದೇ ಬೇಗನೇ ಸಿನಿಮಾ ಮಾಡಿ ಮತ್ತೆ ಪ್ರೇಕ್ಷಕರ ಮುಂದೆ ಬರಲು ಚಿತ್ರತಂಡ ತಯಾರಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next