Advertisement

Ayodhya Ram Mandir: ರಾಮಮಂದಿರ ಪ್ರಾರಂಭ ಮಾಡಿದ್ದೆ ಕಾಂಗ್ರೆಸ್… :ಸಚಿವ ಸಂತೋಷ್ ಲಾಡ್

12:13 PM Jan 06, 2024 | Team Udayavani |

ಹುಬ್ಬಳ್ಳಿ: ಬಿಜೆಪಿ ಶ್ರೀಕಾಂತ ಪೂಜಾರಿ ಬಂಧನ ವಿಚಾರವನ್ನು ಲೋಕಸಭಾ ಚುನಾವಣೆ ಅಜೆಂಡಾವಾಗಿ ಬಳಿಸಿಕೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹರಿಹಾಯ್ದರು.

Advertisement

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಇಂತಹ ವಿಚಾರ ಬಿಟ್ಟರೇ ಬೇರೆ ಯಾವುದೇ ಅಂಜೆಡಾ ಇಲ್ಲ. ಒಪಿಸಿ ಪ್ರಕರಣದಲ್ಲಿ ಇನ್ನೂ 36 ಜನರಿದ್ದಾರೆ. ಶ್ರೀಕಾಂತ ಪೂಜಾರಿ ಒಬ್ಬರೇನಾ ಹಿಂದೂ? ಇನ್ನು 20 ಕೇಸ್ ಗಳಿದ್ದು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದರು. ರಾಮಮಂದಿರ ಪ್ರಾರಂಭ ಮಾಡಿದ್ದೆ ಕಾಂಗ್ರೆಸ್. ಪಕ್ಷದ ನಾಯಕ ರಾಜೀವ ಗಾಂಧಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಕಳೆದ 40 ವರ್ಷದಿಂದ ರಾಮಮಂದಿರಕ್ಕೆ ನೀಡಿದ ಇಟ್ಟಿಗೆ ಎಲ್ಲಿವೆ ಎಂದು ಪ್ರಶ್ನಿಸಿದರು.

ನಾವು ಸಹ ರಾಮನ ಭಕ್ತರು. ಎಲ್ಲರಿಗೂ ಸಮ ಬಾಳು, ಸಮಪಾಲು ಎಂದು ಬದುಕುತ್ತಿದ್ದೇವೆ. ಬಿಜೆಪಿಯವರು ಹಿಂದೂಗಳ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಹಿಂದೂಗಳಿಗೆ ಏನು ಮಾಡಿದ್ದಾರೆ. ನಾನು ಹಿಂದೂ, ನೀವೂ ಕೂಡ ಹಿಂದೂ ತಾನೇ, ನಿಮಗೆ ಏನು ಮಾಡಿದ್ದಾರೆ. ಬಿಜೆಪಿಯಿಂದ ಕೆಲವು ಉದ್ಯಮಿದಾರರಿಗೆ ಅನುಕೂಲವಾಗಿದೆ ಅಷ್ಟೇ ಎಂದರು.

ಇದನ್ನೂ ಓದಿ: Alcohol consumption: ಮದ್ಯ ಸೇವನೆಗೆ ಹಣ ಕೊಡದ್ದಕ್ಕೆ ವ್ಯಕ್ತಿಗೆ ಇಟ್ಟಿಗೆಯಿಂದ ಹೊಡೆದ!

Advertisement

Udayavani is now on Telegram. Click here to join our channel and stay updated with the latest news.

Next