Advertisement

ನೂರಾರು ಕರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯಲ್ಲಿ ಎಸೆದ ಕಿಡಿಗೇಡಿಗಳು!

12:23 PM Mar 23, 2021 | Team Udayavani |

ಸಂಕೇಶ್ವರ (ಬೆಳಗಾವಿ): ಜಿಲ್ಲೆಯ ಸಂಕೇಶ್ವರ ಹೊರವಲಯದಲ್ಲಿ ನೂರಾರು ಗೋವುಗಳ ಕರುಗಳ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದು ಹೋಗಿರುವ ಘಟನೆ ನಡೆದಿದೆ.

Advertisement

ಕಳೆದ ರವಿವಾರ ಈ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಬದಿಯಲ್ಲಿ ಆಕಳುಗಳ ಕರವಿನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಸೆದಿರುವ ಕಿಡಿಗೇಡಿಗಳು ಆಕಳುಗಳ ಕರುವಿನ ತಲೆ‌ಬುರುಡೆ ಹಾಗೂ ಕೈಕಾಲುಗಳನ್ನು ಕತ್ತರಿಸಿ ಎಸೆದು ಹೋಗಿದ್ದಾರೆ.

ಇದನ್ನೂ ಓದಿ:ಠಾಕ್ರೆ ಬಗ್ಗೆ ಮಾತಾಡಿದರೆ ‘ಆ್ಯಸಿಡ್ ದಾಳಿ’ ನಡೆಸುವುದಾಗಿ ಶಿವಸೇನೆ ಬೆದರಿಕೆ : ನವನೀತ್ ಕೌರ್

ಕರುಗಳನ್ನು ಹತ್ಯೆ ಮಾಡಿ ಅವುಗಳ ಆಸ್ತಿಪಂಜರಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಎಸೆದಿದ್ದರೆ ಇನ್ನು ಕೆಲವು ಆಸ್ತಿ ಪಂಜರಗಳನ್ನು ರಸ್ತೆಯ ಪಕ್ಕದಲ್ಲಿ ಎಸೆಯಲಾಗಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಂಕೇಶ್ವರ ಪಿಎಸ್ ಐ ಗಣಪತಿ ಕೊಂಗನೊಳಿ ಈ ಕುರಿತು ತನಿಖೆ ನಡೆಸಿದ್ದಾರೆ.

Advertisement

ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಸಹ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಆಕಳು ‌ಕರುಗಳ ಆಸ್ತಿಪಂಜರಗಳನ್ನು ಒಂದು ಕಡೆಗೆ ಸೇರಿಸಿ ಪುರಸಭೆ ವಾಹನದಲ್ಲಿ ತೆಗೆದುಕೊಂಡು ಹೋಗಿ ಹೊರವಲಯದಲ್ಲಿ ಹೂಳುವ ಕಾರ್ಯ ಮಾಡಿದ್ದಾರೆ. ಆದರೆ ಈ ಘಟನೆ ಸಂಕೇಶ್ವರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ದಯವಿಟ್ಟು ನಮ್ಮ ಮಗುವಿನ ಫೋಟೋ ತೆಗೆಯಬೇಡಿ : ವಿರಾಟ್ -ಅನುಷ್ಕಾ ಜೋಡಿ

Advertisement

Udayavani is now on Telegram. Click here to join our channel and stay updated with the latest news.

Next