Advertisement

Sankeshwar: ಉಕ್ಕಿ ಹರಿದ ಹಿರಣ್ಯಕೇಶಿ ನದಿ; ನೀರಿನಲ್ಲೇ ನಿಂತು ಶಂಕರಲಿಂಗ ದೇವರಿಗೆ ಆರತಿ

05:29 PM Jul 27, 2024 | Team Udayavani |

ಸಂಕೇಶ್ವರ: ಹಿರಣ್ಯಕೇಶಿ ನದಿ ಉಕ್ಕಿ ಹರಿಯುತ್ತಿದ್ದು ಪಟ್ಟಣದಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ನಾಗನೂರು-ಸಂಕೇಶ್ವರ ಸೇತುವೆಗಳು ಮುಳುಗಡೆಯಾಗಿದ್ದು, ಜನವಸತಿ ಪ್ರದೇಶಗಳಿಗೆ ಹಿರಣ್ಯಕೇಶಿ ನದಿ ಆವರಿಸಿಕೊಂಡಿದೆ.

Advertisement

ಹಿರಣ್ಯಕೇಶಿ ಜಲಾನಯನ ಪ್ರದೇಶ ಅಂಬೋಲಿ ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ನೀರಿನ ಹರಿವಿನ ಪ್ರಮಾಣ ಹೆಚ್ಚಾಗುವ ಸಂಭವಿವಿದೆ.

ಪಟ್ಟಣದ ಆರಾಧ್ಯ ದೈವ ಶಂಕರಾಚಾರ್ಯ ಶಂಕರಲಿಂಗ ದೇವಸ್ಥಾನದ ಗರ್ಭಗುಡಿಯಲ್ಲಿ 4 ಅಡಿ ನೀರು ತುಂಬಿದೆ. ನೀರಿನಲ್ಲೇ ಶಂಕರಲಿಂಗ ದೇವರ ಪೂಜಾ ಆರತಿ ನಡೆಯುತ್ತಿದೆ.

ವರುಣನ ಅಬ್ಬರಕ್ಕೆ ಈಗಾಗಲೇ ಕಷ್ಟನಷ್ಟಗಳು ಸಂಭಿವಿಸಿದ್ದು ಶಂಕರಲಿಂಗ ಕಾರ್ಯಾಲಯ, ಉರ್ದು ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಿದ್ದು ಪ್ರವಾಹ ನದಿ ಪಾತ್ರದ ಜನರಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next