Advertisement

Cauvery: “ಸಂಕಷ್ಟ ಸೂತ್ರ ಒಂದೇ ಪರಿಹಾರ”: ಎಂ.ಬಿ. ಪಾಟೀಲ್‌

12:04 AM Aug 30, 2023 | Team Udayavani |

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ಸಂಬಂಧ ಬರಗಾಲದ ವರ್ಷಗಳಿಗೆ ಅನ್ವಯವಾಗುವಂತೆ ಸಂಕಷ್ಟ ಸೂತ್ರವನ್ನು ವಸ್ತುನಿಷ್ಠ ನೆಲೆಯಲ್ಲಿ ರೂಪಿಸಿದರೆ ಅದೊಂದೇ ನಿಜವಾದ ಪರಿಹಾರ ಎಂದು ಕೈಗಾರಿಕ ಸಚಿವ ಎಂ.ಬಿ. ಪಾಟೀಲ್‌ ಅಭಿಪ್ರಾಯಪಟ್ಟಿ¨ªಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಹಿಂದೆ ನಾನೂ ನೀರಾವರಿ ಸಚಿವನಾಗಿದ್ದ ಅನುಭವದ ಮೇಲೆ ಈ ಸಲಹೆ ನೀಡುತ್ತಿರುವುದಾಗಿ ಹೇಳಿದರು.

ತಮಿಳುನಾಡಿನ ಕೋರಿಕೆ ಪ್ರಕಾರ ಈಗ ನೀರು ಬಿಡುವುದು ಅಸಾಧ್ಯ. ಇದನ್ನು ಮನವರಿಕೆ ಮಾಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಯಾವ ರೀತಿಯ ತೀರ್ಮಾನ ಮಾಡಬೇಕು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ಹೀಗಾಗಿಯೇ ಎರಡೂ ರಾಜ್ಯಗಳ ತಜ್ಞರು ಸೇರಿಕೊಂಡು ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ ಎಂದು ಅವರು ಸಲಹೆ ನೀಡಿದರು.

ರಾಜ್ಯವು ಪ್ರತೀವರ್ಷ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ, ಆಗ ತುಂಬಾ ಕಾನೂನು ಹೋರಾಟ ಮಾಡಿದ್ದರಿಂದ ಇದರಲ್ಲಿ 14 ಟಿಎಂಸಿಯಷ್ಟು ಹೊರೆ ನಮಗೆ ಕಡಿಮೆಯಾಗಿ, ಹೆಚ್ಚುವರಿಯಾಗಿ ಬೆಂಗಳೂರಿಗೆ 4.5 ಟಿಎಂಸಿ ಸಿಕ್ಕಿತು. ಇದರಿಂದಾಗಿ ಮೇಕೆದಾಟು ಯೋಜನೆಯ ವಿಚಾರಕ್ಕೆ ಬಲ ಬಂದಿತು ಎಂದವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next