Advertisement

ಶಂಕರನಾರಾಯಣ: ಯೋಜನೆಗಳ ಮಾಹಿತಿ

02:50 AM Jul 13, 2017 | Team Udayavani |

ಸಿದ್ದಾಪುರ: ಸರಕಾರದ ಯೋಜನೆಗಳನ್ನು ನಾವು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದರ ಬಗ್ಗೆ ಸಾರ್ವಜನಿಕರು ವಿಮರ್ಶೆ ಮಾಡಿಕೊಳ್ಳಬೇಕು. ಈಗಿನ ಕಾಲ ಘಟ್ಟದಲ್ಲಿ ಮಾಹಿತಿ ಇದ್ದರೆ ಮಾತ್ರ ನಮ್ಮ ಕೆಲಸ, ನಮ್ಮ ಹಕ್ಕು, ನಮ್ಮ ಯೋಜನೆಗಳನ್ನು ಉಪಯೋಗಿಸಿ ಕೊಳ್ಳಲು ಸಾಧ್ಯ. ಜೀವನದಲ್ಲಿ ಇಂತಹ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಸರಕಾರದ ಯೋಜನೆಗಳನ್ನು ಉಪಯೋಗಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್‌ (ರಿ.)ನ ಸಂಯೋಜಕ ಸಚ್ಚಿದಾನಂದ ಎಂ.ಎಲ್‌. ಅವರು ಹೇಳಿದರು.

Advertisement

ಅವರು ಶಂಕರನಾರಾಯಣ ಗ್ರಾಮದ ತಾರೆಮರನಜೆಡ್ಡು ಶ್ರೀ ಧರ್ಮಶಾಸ್ತ್ರ ಭಜನ ಮಂದಿರ ಇವರ ಆಶ್ರಯದಲ್ಲಿ ನಡೆದ ಕರ್ನಾಟಕ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಆರೋಗ್ಯ ಯೋಜನೆಗಳ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶ್ರೀ ಧರ್ಮಶಾಸ್ತ್ರ ಭಜನ ಮಂದಿರದ ಅಧ್ಯಕ್ಷ ಭೋಜ ಕುಲಾಲ ಸಭೆಯ ಅಧ್ಯಕ್ಷತೆ ವಹಿಸಿ, ಶುಭಹಾರೈಸಿದರು.
ಅತಿಥಿಗಳಾಗಿ ಸಮಾಜ ಸೇವಕ ಪ್ರದೀಪಕುಮಾರ್‌ ಬಸೂÅರು, ಭಜನಾ ಮಂದಿರದ ಸದಸ್ಯರಾದ ನಾಗರಾಜ ಕುಲಾಲ, ಸುರೇಶ್‌ ಮಡಿವಾಳ, ರವಿ ಕುಲಾಲ, ಸುರೇಶ್‌ ಕುಲಾಲ, ರಾಜು ಕುಲಾಲ, ಮಂಜುನಾಥ, ಮಣಿಕಂಠ, ಉದಯ ದೇವಾಡಿಗ, ರಾಜು ದೇವಾಡಿಗ, ಲಕ್ಷ್ಮಣ ಕುಲಾಲ, ಚೈತನ್ಯ, ಅಕ್ಷತಾ ಹಾಗೂ ಇನ್ನೀತರರು ಉಪಸ್ಥಿತರಿದರು.
ಪ್ರವೀಣ್‌ ಕೊಂಡಳ್ಳಿ ಸ್ವಾಗಿತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಕುಲಾಲ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next