Advertisement

ಕ್ರೀಡಾಂಗಣದ ಸಿಬ್ಬಂದಿಗಳಿಗೆ ಸಂಜು ಸ್ಯಾಮ್ಸನ್‌ ನಗದು ಬಹುಮಾನ

10:08 AM Sep 08, 2019 | Team Udayavani |

ಕೊಚ್ಚಿ: ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ತಮ್ಮ 2 ಪಂದ್ಯಗಳ ಸಂಭಾವನೆ 1.50 ಲಕ್ಷ ರೂ.ವನ್ನು ತಿರುವನಂತಪುರದ “ಗ್ರೀನ್‌ಫೀಲ್ಡ್‌ ಅಂತಾರಾಷ್ಟ್ರೀಯ ಕ್ರೀಡಾಂಗಣ’ದ ನಿರ್ವಹಣಾ ಸಿಬ್ಬಂದಿಗಳಿಗೆ ನೀಡಿದ್ದಾರೆ.

Advertisement

ಇಲ್ಲಿ ಭಾರತ “ಎ’-ದಕ್ಷಿಣ ಆಫ್ರಿಕಾ “ಎ’ ತಂಡಗಳ ನಡುವೆ 5 ಪಂದ್ಯಗಳ ಏಕದಿನ ಸರಣಿ ನಡೆದಿದ್ದು, ಭಾರತ ಇದನ್ನು 4-1 ಅಂತರದಿಂದ ಗೆದ್ದಿದೆ. ಬಳಿಕ ಸಂಜು ಸ್ಯಾಮ್ಸನ್‌ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸಿಬ್ಬಂದಿಗಳ ಪರಿಶ್ರಮ
“ಮಳೆಯಿಂದ ಅಡಚಣೆ ಉಂಟಾಗಿದ್ದ ಪಂದ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದವು. ಕ್ರೀಡಾಂಗಣ ಸ್ವಲ್ಪ ಒದ್ದೆಯಾಗಿದ್ದರೂ ಪಂದ್ಯ ನಡೆಸಲಾಗುತ್ತಿರಲಿಲ್ಲ. ಆದರೆ ನಮ್ಮ ಕ್ರೀಡಾಂಗಣ ನಿರ್ವಹಣಾ ಸಿಬಂದಿಗಳು ತುಂಬಾ ಶ್ರಮವಹಿಸಿ ಯಾವ ಪಂದ್ಯವನ್ನೂ ರದ್ದಾಗದಂತೆ ನೋಡಿಕೊಂಡರು.

ಇದರಿಂದ ನಾವು ಸರಣಿ ಗೆಲ್ಲುವಂತಾಯಿತು. ಹೀಗಾಗಿ ನನ್ನ ಎರಡು ಪಂದ್ಯಗಳ ಸಂಭಾವನೆ 1.50 ಲಕ್ಷ ರೂ. ಮೊತ್ತವನ್ನು ಇಲ್ಲಿನ ಸಿಬಂದಿಗಳಿಗೆ ನೀಡುತ್ತಿದ್ದೇನೆ’ ಎಂದು ತಿಳಿಸಿದರು.
ಸಂಜು ಸ್ಯಾಮ್ಸನ್‌ ಅವರ ಈ ನಿರ್ಧಾರಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next