Advertisement

ಶಿವಸೇನಾ ಸಂಸದ ಸಂಜಯ್‌ ರಾವತ್‌ ಮತ್ತೆ 7 ದಿನಗಳ ನ್ಯಾಯಾಂಗ ಬಂಧನ

07:24 PM Oct 10, 2022 | Team Udayavani |

ಮುಂಬಯಿ: ಶಿವಸೇನಾ ಸಂಸದ ಸಂಜಯ್‌ ರಾವತ್‌ ಅವರನ್ನು ಬಾಂಬೆ ಸೆಷನ್ಸ್‌ ಕೋರ್ಟ್‌ ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Advertisement

ಜೈಲಿನಲ್ಲಿರುವ ಸಂಜಯ್‌ ರಾವತ್‌ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯಿತು.

ಇಡಿ ಜುಲೈ 31 ರಂದು ಸಂಜಯ್‌ ರಾವತ್‌ ಅವರು ಪತ್ರಾಚಾಳ್‌ ಮರುಅಭಿವೃದ್ಧಿ ಯೋಜನೆಯಲ್ಲಿ ಹಣಕಾಸಿನ ಹಗರಣ ನಡೆಸಿದ್ದಾರೆ ಎಂದು ಆರೋಪಿಸಿ ಬಂಧಿಸಿತು. ಕೆಲ ದಿನಗಳ ಹಿಂದೆ ಮೇಲ್‌ ಹಗರಣ ಪ್ರಕರಣದಲ್ಲಿ ಸಂಜಯ್‌ ರಾವುತ್‌ ವಿರುದ್ಧ ಇಡಿ ಪೂರಕ ಚಾರ್ಜ್‌ ಶೀಟ್‌ ಸಲ್ಲಿಸಿತ್ತು. 1039 ಕೋಟಿ ರೂ. ಗಳ ದುರುಪಯೋಗದಲ್ಲಿ ರಾವುತ್‌ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.

ಇಂದು ನ್ಯಾಯಾಲಯಕ್ಕೆ ಹಾಜರಾದ ನಂತರ ಸಂಜಯ್‌ ರಾವುತ್‌ ಅವರು ಶಿವಸೇನೆಯ ಚಿಹ್ನೆ ಮತ್ತು ಹೆಸರನ್ನು ಸ್ಥಗಿತಗೊಳಿಸಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದರು. ಶಿವಸೇನೆಯ ಹೊಸ ಲೋಗೋ ಕ್ರಾಂತಿಯನ್ನು ತರಬಹುದು ಮತ್ತು ಭವಿಷ್ಯದಲ್ಲಿ ನಾವು ಹೆಚ್ಚು ಸಮರ್ಥರಾಗುತ್ತೇವೆ ಎಂದು ಸಂಜಯ್‌ ರಾವುತ್‌ ಹೇಳಿದರು. ನಮ್ಮಲ್ಲಿ ಶಿವಸೇನೆಯ ಸ್ಪಿರಿಟಟ್‌ ಇದೆ ಎಂದರು.

ಇದರಲ್ಲಿ ಹೊಸದೇನೂ ಇಲ್ಲ. ಹೊಸ ಚಿಹ್ನೆಯ ನಂತರ ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆಯಲಿದ್ದೇವೆ ಎಂಬ ನಂಬಿಕೆಯನ್ನೂ ರಾವುತ್‌ ವ್ಯಕ್ತಪಡಿಸಿದರು. ನಿಜವಾದ ಶಿವಸೇನೆ ಯಾರೆಂದು ಜನರಿಗೆ ಗೊತ್ತಿದೆ. ಚಿಹ್ನೆ ಬದಲಾದರೂ ಜನರು ತಮ್ಮೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂಬ ನಂಬಿಕೆಯನ್ನೂ ಅವರು ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next