Advertisement

ಮತ್ತೆ ಸೌತ್‌ ನತ್ತ ʼಅಧೀರʼ: ಹೊಸ ಸಿನಿಮಾಕ್ಕಾಗಿ 10 ಕೋಟಿ ರೂ. ಪಡೆಯಲಿದ್ದಾರೆ ಸಂಜಯ್‌ ದತ್

07:32 PM Sep 12, 2022 | Team Udayavani |

ಚೆನ್ನೈ: ಕಾಲಿವುಡ್‌ ನ ಸ್ಟಾರ್‌ ನಿರ್ದೇಶಕ ಲೋಕೇಶ್ ಕನಕರಾಜ್‌ ʼವಿಕ್ರಮ್ʼ ಹಿಟ್‌ ಆದ ಖುಷಿಯ ಬಳಿಕ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾವನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ. ದಳಪತಿ ವಿಜಯ್‌ ಮುಂದಿನ ಚಿತ್ರಕ್ಕೆ ಲೋಕೇಶ್‌ ಆ್ಯಕ್ಷನ್ ಕಟ್ ಹೇಳಲಿದ್ದಾರೆ.  ಈ ಚಿತ್ರದಲ್ಲಿ ಬಾಲಿವುಡ್‌ ನ ಸ್ಟಾರ್‌ ನಟರೊಬ್ಬರು ನೆಗೆಟಿವ್‌ ಶೇಡ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಕೆಜಿಎಫ್‌ -2 ನಲ್ಲಿ ʼಅಧೀರʼನಾಗಿ ಖಡಕ್‌ ಲುಕ್‌ ನಲ್ಲಿ ಕಾಣಿಸಿಕೊಂಡ ಸಂಜಯ್‌ ದತ್ ಮತ್ತೊಮ್ಮೆ ಸೌತ್‌ ಸಿನಿರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್‌ ಆಗಿ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾವೊಂದರಲ್ಲಿ ಮಿಂಚಲಿದ್ದಾರೆ.

ಲೋಕೇಶ್‌ ಕನಕರಾಜ್‌ ಅವರ ಮುಂದಿನ ಚಿತ್ರಕ್ಕೆ ಇನ್ನು ಟೈಟಲ್‌ ನಿಗದಿಯಾಗಿಲ್ಲ. ವಿಜಯ್‌ ಅವರೊಂದಿಗೆ ಮಾಡಲಿರುವ ಈ ಚಿತ್ರದಲ್ಲಿ ಸಂಜಯ್‌ ದತ್‌ ಅವರು ವಿಲನ್‌ ರೋಲ್‌ ನಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಪಿಂಕ್‌ ವಿಲ್ಲಾ ವರದಿ ಮಾಡಿದೆ.

ಈ ಕಥೆಗೆ ಬಲಾಢ್ಯ ವಿಲನ್‌ ಲುಕ್‌ ವುಳ್ಳ ನಟರೊಬ್ಬರು ಬೇಕಾಗಿರುವುದರಿಂದ ನಿರ್ದೇಶಕ ಲೋಕೇಶ್‌ ಕನಕರಾಜ್‌ ಸಂಜಯ್‌ ದತ್‌ ಅವರೊಂದಿಗೆ ಮಾತಾನಾಡಿ ಕಥೆ ಹೇಳಿದ್ದು,ಕಥೆಗೆ ಸಂಜಯ್‌ ದತ್ ಒಪ್ಪಿಗೆ ಕೊಟ್ಟಿದ್ದಾರೆ. ಪಾತ್ರಕ್ಕಾಗಿ ಅವರು 10 ಕೋಟಿ ರೂಪಾಯಿ ಸಂಭಾವನೆಯನ್ನೂ ಕೇಳಿದ್ದಾರೆ ಎಂದು ವರದಿ ತಿಳಿಸಿದೆ.

ʼವಿಕ್ರಮ್‌ʼ ಸೂಪರ್‌ ಹಿಟ್‌ ಬಳಿಕ ಲೋಕೇಶ್‌ ಕನಕರಾಜ್‌ ಅವರಿಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಫೇಮ್‌ ಸಿಕ್ಕಿದೆ. ವಿಜಯ್‌ ಅವರಿಗೂ ಗ್ಲೋಬಲ್‌ ಲೆವೆಲ್‌ ನಲ್ಲಿ ಅಭಿಮಾನಿಗಳಿದ್ದು, ಈ ಚಿತ್ರದಲ್ಲಿ ಸಂಜಯ್‌ ದತ್‌ ಅವರು ಕೂಡ ಇರುವುದರಿಂದ ನಿರೀಕ್ಷೆಯನ್ನು ಹೆಚ್ಚಿಸಿದೆ.

Advertisement

ಇದೇ ತಿಂಗಳ ಅಕ್ಟೋಬರ್‌ ಅಥವಾ ನವೆಂಬರ್‌ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ವರ್ಷ ಚಿತ್ರ ರಿಲೀಸ್‌ ಆಗಲಿದೆ ಎಂದು ವರದಿ ತಿಳಿಸಿದೆ.

ವಿಜಯ್‌ – ರಶ್ಮಿಕಾ ಮಂದಣ್ಣ ಅವರ ʼವಾರಿಸುʼ ಚಿತ್ರ ಥಿಯೇಟರ್‌ ಹಕ್ಕುಗಳನ್ನು ಬಿಟ್ಟು, ಓಟಿಟಿ, ಟಿವಿ, ಆಡಿಯೋ ಹಕ್ಕುಗಳು 150 ಕೋಟಿಗೆ ಮಾರಾಟವಾಗಿದೆ ಎನ್ನುವ ಸುದ್ದಿಯೊಂದು ವೈರಲ್‌ ಆಗಿ ಹಬ್ಬಿದೆ.

Advertisement

Udayavani is now on Telegram. Click here to join our channel and stay updated with the latest news.

Next