Advertisement

ಉಡುಪಿ : ಶಾಲೆಗಳಿಗೆ ಮತ್ತೆ ಸ್ಯಾನಿಟರಿ ಪ್ಯಾಡ್‌ ಪೂರೈಕೆಗೆ ಆಗ್ರಹ

08:57 AM Nov 01, 2022 | Team Udayavani |

ಉಡುಪಿ: ಶಾಲಾ ವಿದ್ಯಾರ್ಥಿನಿಯರಿಗೆ ಸರಕಾರ ಪೂರೈಸುತ್ತಿದ್ದ ಸ್ಯಾನಿಟರಿ ಪ್ಯಾಡ್‌ ಕೊರೊನಾ ಸಂದರ್ಭದಲ್ಲಿ ಸ್ಥಗಿತ ಗೊಂಡಿದ್ದು, ಪುನಃ ಪೂರೈಸುವಂತೆ ಆಗ್ರಹ ಕೇಳಿ ಬರುತ್ತಿದೆ.

Advertisement

ಆರೋಗ್ಯ ಇಲಾಖೆಯು “ಶುಚಿ’ ಯೋಜನೆಯಡಿ ಶಾಲೆಗಳಿಗೆ (ಸರಕಾರಿ ಹಾಗೂ ಅನುದಾನಿತ) ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ ಪೂರೈಸಲಾಗುತ್ತಿತ್ತು. ಕೊರೊನಾ ಸಂದರ್ಭ ಯೋಜನೆ ಸ್ಥಗಿತಗೊಂ ಡಿದ್ದು, ಈವರೆಗೂ ಆರಂಭಗೊಂಡಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಮಾಸಿಕ ಋತುಸ್ರಾವದ ಸಂದರ್ಭ ಹೆಣ್ಣು ಮಕ್ಕಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅನಾರೋಗ್ಯಕರ ವಸ್ತು ಬಳಸಬಾರದು ಮತ್ತು ಈ ಕಾರಣದಿಂದಲೇ ಶಾಲೆಗೆ ರಜಾ ಹಾಕಬಾರದು ಎಂಬ ಸದುದ್ದೇಶದಿಂದ “ಶುಚಿ’ ಯೋಜನೆ ಜಾರಿಗೆ ತರಲಾಗಿತ್ತು. 10ರಿಂದ 19 ವರ್ಷದ ವಿದ್ಯಾರ್ಥಿನಿಯರಿಗೆ ಮಾಸಿಕ 10 ಸ್ಯಾನಿಟರಿ ಪ್ಯಾಡ್‌ಗಳನ್ನು ತಲಾ 21.50 ರೂ.ಗಳಂತೆ ಖರೀದಿಸಿ ವಿತರಿಸಲು ನಿರ್ಧರಿಸಲಾಗಿತ್ತು. 47 ಕೋ.ರೂ. ಖರ್ಚು ಮಾಡಲು 2021ರಲ್ಲಿ ಸಂಪುಟದ ಅನುಮೋದನೆಯೂ ದೊರೆಕಿತ್ತು. ಆದರೆ ಅನುಷ್ಠಾನ ಮಾತ್ರ ಆಗಿಲ್ಲ.

ಕೇಂದ್ರ ಸರಕಾರವು ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ವಿತರಿಸುವ ಯೋಜನೆಯನ್ನು ರೂಪಿಸಿರುವು ದರಿಂದ ಅದರ ಅನುಕೂಲ ಕರ್ನಾಟಕಕ್ಕೂ ಆಗಬಹುದು ಎಂಬ ಕಾರಣಕ್ಕೆ ರಾಜ್ಯ ಸರಕಾರ ಇದನ್ನು ಜಾರಿ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ವಿದ್ಯಾರ್ಥಿನಿಯರ ಆಗ್ರಹ
ಸ್ಯಾನಿಟರಿ ಪ್ಯಾಡ್‌ಗಳ ಪೂರೈಕೆ ಪುನಃ ಆರಂಭಿಸಬೇಕು ಎನ್ನುವ ಆಗ್ರಹವನ್ನು ಶಾಲಾ, ಕಾಲೇಜು (ಪಿಯುಸಿ) ವಿದ್ಯಾರ್ಥಿನಿಯರು ಸರಕಾರದಿಂದ ನಡೆಯುವ ಮಕ್ಕಳ ಸಂಸತ್‌ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಆದರೆ ಸರಕಾರದಿಂದ ಈ ಸಂಬಂಧ ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳದೇ ಇರುವುದರಿಂದ ಅಧಿಕಾರಿಗಳು ಉತ್ತರಿಸಲಾಗದ ಸ್ಥಿತಿಯಲ್ಲಿದ್ದಾರೆ. ಸ್ಯಾನಿಟರಿ ಪ್ಯಾಡ್‌ ವಿದ್ಯಾರ್ಥಿನಿಯರಿಗೆ ಎಷ್ಟು ಆವಶ್ಯಕ ಎಂಬುದು ಸರಕಾರಕ್ಕೂ ತಿಳಿದಿದೆ. ಆದರೆ ಯೋಜನೆ ಅನುಷ್ಠಾನಕ್ಕೆ ಮುಂದಾಗದೇ ಇರುವುದಕ್ಕೆ ಸಾರ್ವ ಜನಿಕ ವಲಯದಲ್ಲೂ ಆಕ್ರೋಶ ಕೇಳಿಬರುತ್ತಿದೆ.

Advertisement

“ಶುಚಿ’ ಯೋಜನೆ ಯಡಿ ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದ ಸ್ಯಾನಿಟರಿ ಪ್ಯಾಡ್‌ಗಳನ್ನು ಕೊರೊನಾ ಸಂದರ್ಭದಲ್ಲಿ ಸ್ಥಗಿತ ಮಾಡಲಾಗಿತ್ತು. ಪುನಃ ಆರಂಭಿಸುವ ಬಗ್ಗೆ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ.
-ಡಾ| ನಾಗಭೂಷಣ ಉಡುಪ, ಡಿಎಚ್‌ಒ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next