Advertisement

ದ್ವೇಷ ಜಾಹೀರಾತಿಗೆ ಸಾನಿಯಾ ಚಾಟಿ

12:13 AM Jun 13, 2019 | Sriram |

ಲಂಡನ್‌: ಭಾರತ ಹಾಗೂ ಪಾಕಿಸ್ಥಾನ ತಂಡಗಳ ನಡುವೆ ರವಿವಾರ ನಡೆಯುವ ಮಹತ್ವದ ಕ್ರಿಕೆಟ್‌ ಪಂದ್ಯಕ್ಕೂ ಐದು ದಿನ ಮೊದಲೇ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ದ್ವೇಷಪೂರಿತ ಜಾಹೀರಾತುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಲೇವಡಿ ಮಾಡುವ ಜಾಹೀರಾತು ಪಾಕಿಸ್ಥಾನದ ಜಾಝ್ ಟಿವಿಯಲ್ಲಿ ಪ್ರಸಾರವಾಗಿದೆ. ಭಾರತದ ಸ್ಟಾರ್‌ ಟಿವಿ ಪಾಕಿಸ್ಥಾನದ ಮೇಲೆ ಭಾರತ ಪಾರುಪತ್ಯ ಸಾಧಿಸುತ್ತದೆ ಎಂಬರ್ಥದ ದೃಶ್ಯಗಳನ್ನು ಪ್ರಸಾರ ಮಾಡಿದೆ. ಎರಡೂ ದೇಶಗಳ ನಡುವಿನ ಪಂದ್ಯವೊಂದರ ಕುರಿತು ನಿರೀಕ್ಷೆ ಹೆಚ್ಚಿಸಲು ಇಂತಹ “ಕಸ’ ಅಗತ್ಯವಿಲ್ಲ. ಇದು ಕ್ರಿಕೆಟ್‌ ಮಾತ್ರ. ಇದಕ್ಕಿಂತ ಹೆಚ್ಚೇನೂ ಅಲ್ಲ ಎಂದು ಸಾನಿಯಾ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next