Advertisement

ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು

11:43 AM May 07, 2019 | Naveen |

ಸಂಡೂರು: ಪುರಸಭಾ ಚುನಾವಣೆಯ ಘೋಷಣೆಯಾಗಿದ್ದು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿವೆ. ಆದರೆ ಅಭ್ಯರ್ಥಿಗಳ ಆಯ್ಕೆ ತೀವ್ರ ಕಠಿಣ ಮತ್ತು ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಹೆಚ್ಚುತ್ತಿದೆ.

Advertisement

ಮಂಡಲ ಪಂಚಾಯಿತಿಯಿಂದ ಪಪಂ ನಂತರ ಪುರಸಭೆಯಾಗಿ ಬೆಳೆದ ಸಂಡೂರು ಪುರಸಭೆಯಲ್ಲಿ ಕಳೆದ ಬಾರಿ ಕನಿಷ್ಠ ಬಹುಮತದಿಂದ ಕಾಂಗ್ರೆಸ್‌ ಅಧಿಕಾರ ಹಿಡಿದಿತ್ತು. ಅದರಲ್ಲಿ ಅಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ ಮಧ್ಯದಲ್ಲಿ ಅಶಾಲತಾ ಸೋಮಪ್ಪ ಮತ್ತು ಗಡಂಬ್ಲಿ ಚನ್ನಪ್ಪ ಅಧ್ಯಕ್ಷರಾಗಿ ಅಧಿಕಾರ ನಡೆಸಿದರು. ವಿರೋಧ ಪಕ್ಷದಲ್ಲಿ 12 ಸದಸ್ಯರು ಬಿ.ಎಸ್‌.ಅರ್‌ ಪಕ್ಷದಿಂದ ಆಯ್ಕೆಯಾಗಿದ್ದರು. ನಂತರ ಅವರು ಬಿಜೆಪಿ ಪಕ್ಷದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು ವಿಶೇಷವಾಗಿದೆ. ಈ ಬಾರಿ ಕಾಂಗ್ರೆಸ್‌ ಪಕ್ಷವು ಸ್ಥಳೀಯವಾಗಿ ಸಚಿವರನ್ನು ಹೊಂದಿದ್ದು ತುಕಾರಾಂ ಅವರ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ಕೈ ಹಿಡಿಯುತ್ತವೆ ಎಂಬ ಭರವಸೆ ಹೊಂದಿದ್ದರೆ, ಬಿಜೆಪಿ ಪಕ್ಷವು ಮೋದಿ ಅಲೆ ಮತ್ತು ಘೋರ್ಪಡೆ ಕುಟುಂಬದಿಂದ ದಿವಂಗತ ಎಂ.ವೈ. ಘೋರ್ಪಡೆಯವರ ಮಗ ಕಾರ್ತಿಕ್‌ ಘೋರ್ಪಡೆ ನೇತೃತ್ವದಲ್ಲಿ ಚುನಾವಣೆ ಪ್ರಾರಂಭವಾಗಿದ್ದು, ಒಂದು ರೀತಿ ತೀವ್ರ ಪೈಪೋಟಿಗೆ ಸಿದ್ಧವಾಗಿ ನಿಂತಿದೆ ಎನ್ನಬಹುದು.

ಪ್ರತಿ ವಾರ್ಡ್‌ನಲ್ಲಿಯೂ ತೀವ್ರ ಸ್ಪರ್ಧೆ ಮಾತ್ರ ನಿಶ್ಚಿತವಾಗಿದೆ. ಒಟ್ಟು 30,876 ಮತದಾರರು ಮತದಾನಕ್ಕೆ ಸಿದ್ಧವಾಗಿದ್ದಾರೆ. ಆದರೆ ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದನ್ನು ಕಾಯ್ದು ನೋಡಬೇಕು.

ಬಸವರಾಜ ಬಣಕಾರ

Advertisement

Udayavani is now on Telegram. Click here to join our channel and stay updated with the latest news.

Next